ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಟ್ಟೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸಲು ರೈತ ಸಂಘಟನೆ ಅಗ್ರಹ

ಕೊಟ್ಟೂರು: ಪಟ್ಟಣದ ತಹಶೀಲ್ದಾರ ಕಚೇರಿ ‌ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣ (ರಿ.) ಜಿಲ್ಲಾ ಅಧ್ಯಕ್ಷರಾದ ಸಿ. ಎ. ಗಾಳೆಪ್ಪ ರವರ ಅದೇಶದ ಮೇರೆಗೆ ತಾಲೂಕು ಮಹಿಳೆ ಘಟಕದ ಅಧ್ಯಕ್ಷೆ ಸಿ ರೇಖಾ ರವರು ನೇತೃತ್ವದಲ್ಲಿ
ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ರೈತರು ಸರಿಯಾದ ಮಳೆ ಇಲ್ಲದೆ ಕಾರಣ ರೈತರು ಭೂಮಿಯಲ್ಲಿ ಬೆಳೆಗಳಿಗೆ ಹಾಕಿದ ಬೀಜಗೊಬ್ಬರಗಳೊಂದಿಗೆ ತುಂಬಾ ಬೆಳೆಗಳು ಹಾಳಾಗಿ ಹೋಗಿವೆ. ಇದರಿಂದ ರೈತರು ಕಂಗಾಲಾಗಿ ರೈತರು ವಿಷ ಸೇವನೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಇದರಿಂದ ತಾವುಗಳು ಸರಿಯಾದ ಮಳೆ ಇಲ್ಲದ ಕಾರಣ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತಹಶೀಲ್ದಾರಾದ ಅಮರೇಶ ಜಿ.ಕೆ ರವರಿಗೆ ಸಂಘಟನೆಯ ಪದಾಧಿಕಾರಿಗಳು,ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕೊಟ್ಟೂರು ತಾಲೂಕು ಮಹಿಳೆ ಘಟಕದ ಅಧ್ಯಕ್ಷೆ ಸಿ ರೇಖಾ ರವರು ಮಾತನಾಡಿ ಬೆಳೆ ನಷ್ಟವಾದ ರೈತರಿಗೆ ಬೆಳೆ ಪರಿಹಾರವಾಗಿ ಒಂದು ಎಕರೆಗೆ ರೂ.30,000/-ಗಳನ್ನು ಕೂಡಲೇ ಸರ್ಕಾರ ನೀಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು
ಒಂದು ವೇಳೆ ಈ ಮನವಿ ಪತ್ರ ಸಲ್ಲಿಸಿದ ನಂತರವೂ ಸರ್ಕಾರ ಇದಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸು ದೇವ ಮೇಟಿ ಬಣದ ಸಂಘಟನೆಯು ತಾಲೂಕಿನ ರೈತರಿಗೆ ಕರೆ ನೀಡಿ ಕೊಟ್ಟೂರು ಬಂದ್ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಘಟಕದ ಉಪಾಧ್ಯಕ್ಷರು ಸಿದ್ದೇಶಿ. ನಾಗಪ್ಪ. ನಡುಮಾವಿನಹಳ್ಳಿ ನಾಗಮ್ಮ.ಕಮಲಮ್ಮ. ನೇತ್ರಮ್ಮ.ಸುನೀತ.ಹನುಮಕ್ಕ. ಗಂಗಮ್ಮ. ಸರ್ವ ಸದಸ್ಯರು ತಾಲೂಕಿನ ರೈತರು ಇದ್ದರು.

ವರದಿ : ಕೆ ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!