ಭಾಗಮಂಡಲ : ಮಳೆ ನಡುವೆಯೇ ಕೊಡಗಿಗೆ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಭಾಗಮಂಡಲದ ದೇವಾಲಯಕ್ಕೆ ಭೇಟಿ ನೀಡಿದ ಸಿ.ಎಂ ರಾಜ್ಯದ ಜಲಾಶಯಗಳು ಭತಿ೯ಯಾಗಲಿ ಎಂದು ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾಥ೯ನೆ ಸಲ್ಲಿಸಿದರು.
ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಹೇಳಿದರು.
ಚಾಮರಾಜನಗರದಲ್ಲಿ ಬೇಟೆಗಾರರು ಎಂಬ ಸಂಶಯಾಸ್ಪದ ಮೂವರು ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮೖತಪಟ್ಟವರ ಬಳಿ ಕೋವಿ, 2 ಕೆ.ಜಿ. ಮಾಂಸ ಕೂಡ ಇತ್ತು. ಓವ೯ ಪರಾರಿಯಾಗಿದ್ದಾನೆ. ತನಿಖೆಯ ನಂತರ ಸ್ಪಷ್ಟತೆ ದೊರಕಲಿದೆಯೆಂದರು.
ತಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ನಿಮ್ಮೆಲ್ಲರ ಆಸೆಯಂತೆ ನನಗೂ ಕೂಡ ಈ ರಾಜ್ಯದ ಮುಖ್ಯಮಂತ್ರಿಯಾಗಲು ಗುರು-ಹಿರಿಯರು, ಪಕ್ಷ ನಿಮ್ಮೆಲ್ಲರ ಆಶೀರ್ವಾದ ದೊರಕಿದೆ. ಹೀಗಾಗಿ ಮಡಿಕೇರಿ ಶಾಸಕರೂ ಆತ್ಮೀಯ ಸ್ನೇಹಿತ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕರು ಹಾಗೂ ರಾಜಕೀಯ ಕಾರ್ಯದರ್ಶಿಯಾದ ಎ.ಎಸ್.ಪೊನ್ನಣ್ಣರವರು ಹಾಗೂ ನೀವೆಲ್ಲರೂ ಇಂದು ಮಡಿಕೇರಿಯಲ್ಲಿ ಭವ್ಯವಾದಂತ ಸ್ವಾಗತವನ್ನು ಕೊಟ್ಟಿದ್ದೀರಿಯೆಂದು ಕಾಯ೯ಕತ೯ರಿಗೆ ಡಿ.ಕೆ.ಶಿ ಅಭಿನಂದನೆ ಸಲ್ಲಿಸಿದರು .
ವರದಿ : ಪ್ರಿತುನ್ ಪೂವಣ್ಣ




















