ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುನಾಡ ಕಂದ ವರದಿಯ ಫಲಶೃತಿ:ಅನಧಿಕೃತ ಪೈಪ್ ಲೈನ್ ತೆರವುಗೊಳಿಸಿ,ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತಿ

ಹತ್ತು ವರ್ಷಗಳಿಂದ ನೀರು ಕದಿಯುತ್ತಿದ್ದ ನೀರು ಕಳ್ಳನ ಅನಧಿಕೃತ ಪೈಪ್ ಲೈನ್ ತೆರವುಗೊಳಿಸಿ,ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತಿ

ಕೊಪ್ಪಳ:ಸಿದ್ಧಾಪುರ:ಕಳೆದ ಹತ್ತು ವರ್ಷಗಳಿಂದ ಗ್ರಾಮ‌ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ) ನೀರು ಕದಿಯುತ್ತಿದ್ದ ಸೂರ್ಯಕಾಂತ ಹೊಸಮನಿ ಎಂಬ ನೀರು ಕಳ್ಳನಿಗೆ ನೋಟಿಸ್ ನೀಡಿದ ಬೆನ್ನಲ್ಲೆ,ಅನಧಿಕೃತವಾಗಿ ಅಳವಡಿಸಿಕೊಂಡಿದ್ದ ಪೈಪ್ ಲೈನ್ ನ್ನು ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮ ಪಂಚಾಯತಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯವರ ಮೂಲಕ ತೆರವುಗೊಳಿಸಿ,ನೀರು ಕಳ್ಳನಿಗೆ ಬಿಸಿ ಮುಟ್ಟಿಸಿದ್ದಾರೆ .
ಆದರೆ ಹತ್ತು ವರ್ಷಗಳಿಂದ ಸಾರ್ವಜನಿಕ ಟ್ಯಾಬ್ ನಿಂದ ಅನಧಿಕೃತವಾಗಿ ಪೈಪ್ ಲೈನ್ ಅಳವಡಿಸಿಕೊಂಡು ನೀರು ಕದ್ದಿರುವ ಈ ಕಳ್ಳನ ವಿರುದ್ದ ಸಾರ್ವಜನಿಕರ ದೂರಿನ ಪ್ರಕಾರ ಹಾಗೂ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಎಷ್ಟು ದಂಡ ಹಾಕುತ್ತಾರೆ ಹಾಗೂ ಯಾವ ರೀತಿಯ ಕ್ರಮ‌ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ