ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನಗಳು.

           ೧.

ಶರಣರ ಸುಳ್ನುಡಿಗಳನು
ನಾವಿಂದು ಅಪಾರ್ಥ ಮಾಡಿದ್ದೇವೆ, ಅಯ್ಯಾ,
ಅವರು ಹೇಳಿದ್ದಕ್ಕೆಲ್ಲಾ
ವಿರುದ್ಧ ದಿಕ್ಕಿನಲ್ಲಿ ನಾವು
ನಡೆಯುತ್ತಿರುವೆವಯ್ಯ,!
ಅರ್ಥವಿರದ ಆಚರಣೆಗಳ
ಅನುಕರಿಸುತ್ತಾ,
ಅವಿವೇಕಿಗಳಾಗಿಹೆವು,
ನೋಡಾ ಶಿವ ಶಿವಾ!

       ೨.

ಅವಿವೇಕ, ಅಜ್ಞಾನಗಳ
ದೂರ ಸರಿಸಯ್ಯ,
ವಿವೇಕ, ಸುಜ್ಞಾನಗಳ
ನನ್ನೊಳಗಿರಿಸಯ್ಯ,
ಕತ್ತಲೆಯೇ ತುಂಬಿದೆ,
ಈ ಬಾಳು, !
ಬೆಳಕಿಗಾಗಿ ಹಂಬಲಿಸಿದೆ ,
ಎನ್ನ ಮನ,ಬೆಳಕ ತೋರಿ
ಮುನ್ನಡೆಸೆಂದ ಶಿವ ಶಿವಾ!

      ೩.

ಕಾಲ ಕೆಟ್ಟಿತೆಂದು ಕೈ ಕಟ್ಟಿ
ಕುಳಿತರೆ ಹೊಟ್ಟೆಗೆ ಹಿಟ್ಟು
ಸಿಗುವುದೇನಯ್ಯ,!
ಕೆಟ್ಟಿರುವುದು ಕಾಲವಲ್ಲಯ್ಯ,
ನಮ್ಮವರ ಮನಸ್ಸುಗಳಯ್ಯ,
ಮುಂದೆ ಇನ್ನೆಂಥ ದಿನಗಳು
ಬರಲಿವೆಯೋ ಶಿವ ಶಿವಾ!.

 ೪.

ಹೇ ಹುಲು ಮಾನವ,
ನಾ ಅವರಂತಾಗಲಿಲ್ಲ,
ನಾ ಇವರಂತಾಗಲಿಲ್ಲ,
ಎಂಬ ಕೊರಗಿನಲಿ
ಸೊರಗಿ ಹೋಗುವ ಮುನ್ನ
ನಿನ್ನಂತೆ ನೀನಾಗಿ
ಹೋಗೆಂದ ಶಿವ ಶಿವಾ!

  • ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
    ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ -ಕೊಪ್ಪಳ.
    ಮೊಬೈಲ್ ಸಂಖ್ಯೆ.
    ೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ