ಬಳ್ಳಾರಿ / ಕಂಪ್ಲಿ : ಪ್ರತಿಯೊಬ್ಬರೂ ಹಣಬೆ ಬೆಳೆಯುವುದರಿಂದ ಸ್ವಯಂ ಉದ್ಯೋಗ ಜೊತೆಗೆ ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಿನೋದ ಕುಮಾರ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಲೂಕು ಪಂಚಾಯಿತಿ ಮತ್ತು ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ಅಡಿಯಲ್ಲಿ ಏರ್ಪಡಿಸಿದ ಅಣಬೆ ತಯಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಸಹಾಯ ಸಂಘದ ಯುವಕ ಮತ್ತು ಯುವತಿಯರು ಅಣಿಬೆ ಬೆಳೆಯುವದರಿಂದ ಖರ್ಚು ಕಡಿಮೆ ಹೆಚ್ಚು ಲಾಭ, ಜೊತೆಗೆ ಬ್ಯಾಂಕ್ನಿಂದ ಸಾಲ ಸೌಲಭ್ಯ ಜತೆಗೆ ಸಹಾಯಧನ ಪಡೆಯಬಹುದು ಅಣಬೆ ತಿನ್ನುವುದರಿಂದ ಮನುಷ್ಯನಿಗೆ ಪೌಷ್ಟಿಕಯುಕ್ತ ಆಹಾರ ಪಡೆಯಬಹುದು ಕೃಷಿ ಜೊತೆಗೆ ಹೈನುಗಾರಿಕೆ ಕೋಳಿ ಕುರಿ ಸಾಗಣಿಕೆ ಇವೆಲ್ಲವನ್ನೂ ಜೀವನದಲ್ಲಿ ಅಳವಡಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ತರಬೇತುದಾರರಾದ ಜಿ. ಜಡೇಪ್ಪ ಮಾತನಾಡಿ ಅಣಬೆ ಲಾಭದ ಬಗ್ಗೆ ಮತ್ತು ಮಾರುಕಟ್ಟೆ ಮಾರಾಟ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡಯವುದರ ಬಗ್ಗೆ ಮಾಹಿತಿ ನೀಡಿದರು. 35 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ತಾಪಂ ಇ.ಓ ಶ್ರೀ ಕುಮಾರ ಜಿಲ್ಲಾ ಕೃಷಿ ಕೇಂದ್ರದ ಅಧಿಕಾರಿ ಅಭಿಲಾಷ, ಹಿರಿಯ ವಿಜ್ಞಾನಿ ಡಾ. ಶಿಲ್ಪಾ , ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ನಿರ್ದೇಶಕ ರಾಜಸಾಭ್ , ಜಿಲ್ಲಾ ಯೋಜನಾ ಪ್ರಯೋಜನ [ ಎನ್ ಆರ್ ಎಲ್ ಎಂ] ಅಧಿಕಾರಿ ರಾಜೇಂದ್ರ ಸೇರಿ ಅನೇಕ ಶಿಬಿರಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
