ಬಿಳವಾರ ಗ್ರಾಮದಲ್ಲಿ ಒಂದು ವರ್ಷದಿಂದ ಬಿರುಕು ಬಿಟ್ಟ ಹೊಸ ಬಡಾವಣೆಯ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ : ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ಮಲ್ಲಣ್ಣ ಎಂ. ಪೂಜಾರಿ ಆಕ್ರೋಶ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಹೊಸ ಬಡಾವಣೆಯ ಕಿರಿಯ ಪ್ರಾಥಮಿಕ ಶಾಲೆಯು ಸಂಪೂರ್ಣ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ ಶಾಲೆಯ ಹಿಂಭಾಗದ ಗೊಡೆಯು ಸಂಪೂರ್ಣ ಕುಸಿದು ಬಿದ್ದಿದೆ ಇಂತಹ ಬಿರುಕು ಬಿಟ್ಟ ಶಾಲೆಯ ಕಟ್ಟಡದಲ್ಲಿ ಕೆಲ ಯುವಕರು ಅನಧಿಕೃತವಾಗಿ ತಿರುಗಾಡುತ್ತಿದ್ದಾರೆ. ಈ ಶಾಲಾ ಕಟ್ಟಡವು ಬಿರುಕು ಬಿಟ್ಟು ಒಂದು ವರ್ಷವಾದರೂ ಈ ಕಟ್ಟಡವನ್ನು ನೆಲಸಮ ಮಾಡಿರುವುದಿಲ್ಲ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೆ ಕಾರಣವಾಗಿರಬಹುದು ಒಂದು ವೇಳೆ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದು ಜೀವ ಹಾನಿಯಾದರೆ ಯಾರನ್ನು ಹೊಣೆಗಾರರನಾಗಿ ಮಾಡಬೇಕು ಅಧಿಕಾರಿಗಳನ್ನೊ? ಅಥವಾ ಜನಪ್ರತಿನಿಧಿಗಳನ್ನೊ? ಎಂದು ಕನಕ ಕಾರ್ಮಿಕ ಕಲ್ಯಾಣ ಸಂಘದ ರಾಜ್ಯದ್ಯಕ್ಷರಾದ ಮಲ್ಲಣ್ಣ ಎಂ. ಪೂಜಾರಿ ಅವರು ಈ ಅವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಬಿರುಕು ಬಿಟ್ಟ ಶಾಲಾ ಕಟ್ಟಡವನ್ನು ನೆಲಸಮ ಮಾಡಬೇಕು ಮುಂದೆ ಆಗುವ ಗಂಭೀರವಾದ ಅನಾಹುತವನ್ನು ತಪ್ಪಿಸಬೇಕು ಎಂದು ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ. ಪೂಜಾರಿ ಅವರು ತಿಳಿಸಿದ್ದಾರೆ ಈಗಾಗಲೇ ಕೆಲವು ಸಾರ್ವಜನಿಕರು ಈ ಬಿರುಕುಬಿಟ್ಟ ಶಾಲಾ ಆಸಪಾಸಿನಲ್ಲಿ ಆತಂಕದಲ್ಲಿ ತಿರುಗಾಡುತ್ತಿದ್ದಾರೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಿರುಕು ಬಿಟ್ಟ ಶಾಲಾ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಬೆಕು ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಗ್ರಾಮಸ್ಥರ ಸಮ್ಮುಖದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕನಕ ಕಾರ್ಮಿಕ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿ ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
