ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಲಮೇಲ, ಕಡಣಿ, ತಾವರಖೇಡ ರಸ್ತೆ ಅಗಲೀಕರಣಕ್ಕೆ ದಿನಾಂಕ 18/6/2025 ರಂದು ಭೂಮಿ ಪೂಜೆ ನೆರವೇರಿತು.
ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ಆಲಮೇಲ ಕಡಣಿ ತಾವರಖೇಡ್ 2.ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ಅಗಲೀಕರಣದ ಭೂಮಿ ಪೂಜೆಯು ಹಾಗೂ ಉರ್ದು ಶಾಲೆಯ ಕಟ್ಟಡ ಭೂಮಿ ಪೂಜೆಯನ್ನು ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ ಅಣ್ಣ ಮನಗೂಳಿ ಅವರು ನೆರವೇರಿಸಿ ಮಾತನಾಡಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ವಿಶೇಷವಾದ ಅನುದಾನ ನೀಡುವುದರ ಜೊತೆಗೆ ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ, ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಕೆಲಸಗಳನ್ನು ಮಾಡುವುದಾಗಿ ಹೇಳಿದರು. ಮತ್ತು ಉರ್ದು ಶಾಲೆಯ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು. ಸರ್ಕಾರದಿಂದ ಶಿಕ್ಷಣಕ್ಕಾಗಿ ನಾನು ಹೆಚ್ಚಿನ ಸೌಕರ್ಯವನ್ನು ಒದಗಿಸುತ್ತೇನೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಲು ತಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.ಈ ಭೂಮಿ ಪೂಜೆ ಸಮಾರಂಭದಲ್ಲಿ ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬಡ, ಎಪಿಎಂಸಿ ಅಧ್ಯಕ್ಷ ಬಸವರಾಜ್ ಬಾಗೇವಾಡಿ, ಆಲಮೇಲ ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರ್, ಬಸಲಿಂಗಪ್ಪ ಕತ್ತಿ ಪಂಚಾಯತಿ ಅಧ್ಯಕ್ಷರು ಕಡಣಿ, ಬಸವರಾಜ್ ತಾವರಗೇರಿ ಗ್ರಾಮ ಪಂಚಾಯತಿ ಸದಸ್ಯರು ಕಡಣಿ, ಲೋಕೋಪಯೋಗಿ ಇಲಾಖೆಯ ಅರುಣಕುಮಾರ್ ಸರ್, ಮತ್ತು ಕಡಣಿ ಗ್ರಾಮಪಂಚಾಯತಿ ಸರ್ವ ಸದಸ್ಯರು, ತಾವರೆಖೇಡ, ತಾರಾಪುರ, ಕಡಣಿ ಗ್ರಾಮದ ಹಿರಿಯರು, ಯುವಕರು, ರಾಜಕೀಯ ಮುಖಂಡರು, ಉರ್ದು ಶಾಲೆಯ ಶಿಕ್ಷಕರು, ಮಕ್ಕಳು ಭಾಗಿಯಾಗಿದ್ದರು.
ವರದಿ. ಹಣಮಂತ ಚ ಕಟಬರ



















