ಬಳ್ಳಾರಿ / ಕಂಪ್ಲಿ : ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಶೋಷಿತ ವರ್ಗದ ಧ್ವನಿಯಾಗಿ ಮಹಿಳಾ ಘಟಕದ ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ .ಕೃಷ್ಣಪ್ಪ ಸ್ಥಾಪಿತ)ಯ ಕಂಪ್ಲಿ ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ಹೇಳಿದರು.
ಸ್ಥಳೀಯ ಐತಿಹಾಸಿಕ ಸೋಮಪ್ಪ ದೇವಸ್ಥಾನ ಆವರಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ನೂತನ ಮಹಿಳಾ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದ ನಂತರ ಮಾತನಾಡಿ, ಧೀನ ದಲಿತರ, ಶೋಷಿತ ವರ್ಗದವರ ಸಂಕಷ್ಟವನ್ನು ಅರಿತು, ಇವರಿಗೆ ಸಾಮಾಜಿಕವಾಗಿ ನ್ಯಾಯ ಕೊಡಿಸಬೇಕೆಂಬ ನಿಟ್ಟಿನಲ್ಲಿ ಪ್ರೊ .ಕೃಷ್ಣಪ್ಪ ಅವರ ಸಂಘಟನೆ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಜನರ ಧ್ವನಿಯಾಗಿ, ಸರ್ಕಾರದ ಸೌಲಭ್ಯಗಳನ್ನು ಜನತೆಗ ತಲುಪಿಸುವ ನಿಟ್ಟಿನಲ್ಲಿ ಹೋರಾಟದ ಮೂಲಕ ಕೆಲಸ ಮಾಡಿಕೊಂಡು ಬಂದಿದೆ. ಕಂಪ್ಲಿ ತಾಲೂಕಿನಲ್ಲಿ ಮೊದಲ ಬಾರಿಗೆ ಮಹಿಳಾ ಘಟಕ ರಚಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರು ಸಂಘಟನೆಗೆ ಶಕ್ತಿ. ಅವರು ಸಂಘಟನೆಯ ಧ್ಯೇಯ ಉದ್ದೇಶದೊಂದಿಗೆ ಸಕ್ರೀಯವಾಗಿ ಕೆಲಸ ಮಾಡಬೇಕು ಎಂದರು.
ನಂತರ ಸಂಘಟನಾ ಸಂಚಾಲಕ ಹೆಚ್. ಮರಿಯಪ್ಪ ಮಾತನಾಡಿ, ಕಂಪ್ಲಿ ಪಟ್ಟಣ ಹಾಗೂ ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಹೋರಾಟದ ಮೂಲಕ ಈಡೇರಿಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ.
ಮಹಿಳಾ ಸಂಘಟಕರು ಶೋಷಿತರ ಪರವಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ತಿಪ್ಪೇಶ ಇದ್ದರು.
ಆಯ್ಕೆ: ಕಂಪ್ಲಿ ತಾಲೂಕು ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವಸಂತಮ್ಮ(ಗೌರವಾಧ್ಯಕ್ಷೆ), ಎನ್.ವಿ.ರೇಣುಕಮ್ಮ(ಸಂಚಾಲಕಿ),
ಸಿ.ಗಾಯತ್ರಿ, ಬಿ.ಅನ್ನಪೂರ್ಣ,
ಎನ್.ವನಿತಾ (ಸಂಘಟನಾ ಸಂಚಾಲಕರು), ತಿಪ್ಪಮ್ಮ(ಖಜಾಂಚಿ), ಮತ್ತು ಎಸ್.ರೇಣುಕಾ,
ರಾಧಾ, ಉಮಾ, ಅಂಜಲಿ, ಶಂಕ್ರಮ್ಮ, ಸರಸ್ವತಮ್ಮ ಇವರು ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ನೇಮಕಗೊಂಡರು.
ವರದಿ : ಜಿಲಾನಸಾಬ್ ಬಡಿಗೇರ್



















