ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಡ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ದಂಡಾಧಿಕಾರಿ ಕೆ. ವಿಜಯಕುಮಾರ್ ಭೇಟಿ ನೀಡಿದರು.
ಆಲಮೇಲ ತಾಲೂಕಿನ ಮಡ್ನಳ್ಳಿ ಗ್ರಾಮಕ್ಕೆ ಆಲಮೇಲ ತಾಲೂಕು ದಂಡಾಧಿಕಾರಿಗಳಾದ ಕೆ. ವಿಜಯ್ ಕುಮಾರ್ ಭೇಟಿ ನೀಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ತೊಂದರೆಗಳನ್ನು ಪರಿಶೀಲಿಸಿ ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಬಗೆಹರಿಸುವುದಾಗಿ ಗ್ರಾಮಸ್ಥರಿಗೂ ಹಾಗೂ ಮುದ್ದು ಮಕ್ಕಳಿಗೆ ವಿಶ್ವಾಸ ಬರುವ ನಿಟ್ಟಿನಲ್ಲಿ ಅವರೊಂದಿಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಈರಣ್ಣ ಬಾ. ಬಿರಾದರ ಹಾಗೂ ಕರ್ನಾಟಕ ಜನ ಸೈನ್ಯ ಜಿಲ್ಲಾ ಅಧ್ಯಕ್ಷ ರವಿಕಾಂತ್ ನಾಟೀಕಾರ ಮತ್ತು ಗ್ರಾಮಸ್ಥರಾದ ಖಾಜಪ್ಪ ಜಮಾದಾರ್ ಮಹೇಶ್ ಸೀತಿಮನಿ ಕಾಶಿನಾಥ ಕ್ಷತ್ರಿ,ಧರೆಪ್ಪ ಕಕ್ಕಳಮೆಲಿ ಮತ್ತು ಗ್ರಾಮದ ಯುವಕರು ಹಿರಿಯರು ಶಾಲೆಯಲ್ಲಿನ ತೊಂದರೆಗಳು ಗ್ರಾಮಸ್ಥರು ಮತ್ತು ಸಂಘಟನೆಗಳ ಮುಖಾಂತರ ಸಂಬಂಧಪಟ್ಟ ಪಂಚಾಯಿತಿಗೂ ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆಮನವಿ ಸಲ್ಲಿಸಿರೂ ಸ್ಪಂದಿಸಲಿಲ್ಲ ಇದಕ್ಕೆ ತಾವುಗಳು ಕ್ರಮ ಕೈಗೊಳ್ಳಬೇಕೆಂದು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಡ್ನಳ್ಳಿ ಗ್ರಾಮಸ್ಥರ ತೊಂದರೆಗಳನ್ನು ಆಲಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾನ್ಯ ದಂಡಾಧಿಕಾರಿಗಳಾದ ಕೆ ವಿಜಯ್ ಕುಮಾರ್ ಅವರು ಹೇಳಿ ನನ್ನ ಕಡೆಯಿಂದ ಆಗುವ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾದರು.
ವರದಿ. ಹಣಮಂತ ಚ. ಕಟಬರ್



















