ಕೊಪ್ಪಳ/ ಕುಕನೂರು : ಒಳ ಮೀಸಲಾತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಕರ್ನಾಟಕ ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಜಾರ ಸಮಾಜದ ಮುಖಂಡ ಸುರೇಶ ಬಳೂಟಗಿ ಆರೋಪಿಸಿದರು.
ಅವರು ಗುರುವಾರದಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗ ನಡೆಸುತ್ತಿರುವ ಎಸ್ ಸಿ ಸಮುದಾಯದ ಒಳ ಮೀಸಲಾತಿ ಸಮೀಕ್ಷೆ ಸಮರ್ಪಕವಾಗಿರದೆ ನಮ್ಮ ಸಮಾಜದವರು ಈ ಸಮೀಕ್ಷೆಯಿಂದ ಹೊರಗುಳಿದರೆ ಸರಕಾರಕ್ಕೆ ಸಮಾಜದವರ ಅಂಕಿ ಅಂಶಗಳ ಮಾಹಿತಿ ಸಿಗುವುದಿಲ್ಲ, ಇದರಿಂದ ಸಮಾಜದ ಜನ ಸಂಖ್ಯೆ ಕಡಿಮೆ ತೋರಿಸಿದಲ್ಲಿ ಒಳ ಮೀಸಲಾತಿಯಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದರು.
ನಮ್ಮ ಜನಾಂಗದವರಲ್ಲಿ ಅನಕ್ಷರಸ್ಥರ ಸಂಖ್ಯೆ ಬಹಳ ಇರುವುದರಿಂದ ಅವರು ಈ ಸಮೀಕ್ಷೆಯಲ್ಲಿ ಸರಿಯಾಗಿ ಭಾಗಿಯಾಗಿರುವುದಿಲ್ಲ ಎಂದರು.
ಸಿ. ಎಂ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಹೊರಟಿದ್ದು ಇದರಿಂದ ನಮ್ಮ ಭೋವಿ, ಕೊರಚ, ಕೊರಮ, ಬಂಜಾರ ಸಮುದಾಯದವರಿಗೆ ಬಹಳ ಅನ್ಯಾಯವಾಗುತ್ತದೆ ಎಂದು ತಿಳಿಸಿದರು.
ತಾಂಡಾ ಅಭಿವೃದ್ದಿ ನಿಗಮಗಳು ಕೇವಲ ಹೆಸರಿಗೆ ಮಾತ್ರ ಇದ್ದು, ಅವುಗಳಲ್ಲಿ ಅನುದಾನದ ಕೊರತೆ ಸಾಕಷ್ಟಿದೆ ಒಳ ಮೀಸಲಾತಿ ಸಮೀಕ್ಷೆ ಇಲ್ಲಿಗೆ ನಿಲ್ಲಿಸಿ ಎಂದ ಅವರು ಬಂಜಾರ, ಭೋವಿ, ಕೊರಮ, ಕೊರಚ ಸಮಾಜದವರಿಗೆ ಶೇ. 6% ಮೀಸಲಾತಿ ನಿಗದಿ ಮಾಡಿ ನಮ್ಮ ಸಮಾಜಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಈ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಸುರೇಶ ಬಳೂಟಗಿ, ಓಬಣ್ಣ ಚವ್ಹಾಣ, ಕುಮಾರ ಬಳಗೇರಿ, ಯಮನೂರಪ್ಪ ಭಾನಾಪೂರ, ಪ್ರಕಾಶ ಬಳಗೇರಿ, ಲಿಂಬಣ್ಣ ನಾಯಕ, ಹನುಮಂತ ಚವ್ಹಾಣ ಇನ್ನಿತರ ಮುಖಂಡರು ಇದ್ದರು.
- ಕರುನಾಡ ಕಂದ



















