ಬಳ್ಳಾರಿ/ ಕಂಪ್ಲಿ : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಕಂಪ್ಲಿ ಪಟ್ಟಣದ ಕಾಂಗ್ರೆಸ್ ಮುಖಂಡ ಬಿ. ಜಾಫರ್ ಸಾಧಿಕ್ ಅಧಿಕಾರೇತರ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.
ಜಿಲ್ಲಾ ಆಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆದೇಶ ನೀಡಿ ನಾಮನಿರ್ದೇಶನಗೊಳಿಸಿದೆ.
ಜಿಲ್ಲಾ ನಾಮ ನಿರ್ದೇಶಕರಾದ ಬಿ. ಜಾಫರ್ ಸಾಧಿಕ್ ಮಾತನಾಡಿ ಅಲ್ಪಸಂಖ್ಯಾತ, ಹಜ್ ಕಮಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಝೆಡ್. ಜಮೀರ್ ಅಹಮ್ಮದ್ ಖಾನ್, ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜೆ. ಎನ್. ಗಣೇಶ ರವರಿಗೆ ಹೃತ್ಪೂರ್ವಕ ಧನ್ಯವಾದಗಳು, ಈ 15 ಅಂಶಗಳ ಯೋಜನೆಯು ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ, ವೃದ್ದಾಪ್ಯ ಸಹಾಯ ಮುಂತಾದ ಮೌಲಿಕ ಸೇವೆಗಳ ಸಮನ್ವಯದಲ್ಲಿ ರೂಪುಗೊಂಡಿದ್ದು, ಅದರ ಅನುಷ್ಠಾನದಲ್ಲಿ ಸಮಾನ ಹಕ್ಕುಭಾವನೆಯಿಂದ ಕಾರ್ಯನಿರ್ವಹಿಸುತ್ತೇನೆ, ಇಲಾಖೆಗಳ ಮೇಲೆ ನಿಗಾ ವಹಿಸಿ, ಅನುದಾನ ಬಳಕೆಯ ಪ್ರಾಮಾಣಿಕತೆ, ಜನರಿಗೆ ತಲುಪುವ ಸೇವೆಯನ್ನು ಹಾಗೂ ಯಾವುದೇ ಅವ್ಯವಹಾರಗಳ ಮೇಲೆ ಪ್ರಶ್ನೆ ಎತ್ತುವ ಜವಾಬ್ದಾರಿ ಕಾರ್ಯನಿರ್ವಹಿಸುತ್ತೇನೆ ಎಂದರು.
ವರದಿ : ಜಿಲಾನಸಾಬ್ ಬಡಿಗೇರ್



















