ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಯಿಂದಾಗಿ ಗಂಗಾವತಿ, ಮರಳಿ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಬಹಳ ಬೆಳೆ ನಾಶವಾಗಿದೆ. ಈ ಭಾಗದ ರೈತರು 1 ಎಕರೆಗೆ 50ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯುತ್ತೇವೆ ಎಂಬ ಉತ್ಸಾಹದಲ್ಲಿದ್ದ ರೈತರಿಗೆ ಹಿಂಗಾರು ಮಳೆ ಆತಂಕ ತಂದು ಒಡ್ಡಿದೆ, ರೈತರು ಎಕರೆಗೆ 35 ರಿಂದ 40 ಸಾವಿರ ಮೌಲ್ಯದ ಬೆಳೆ ಹಾನಿಯಾಗಿದೆ ಭತ್ತದ ಕಟಾವು ಹಂತಕ್ಕೆ ಬಂದಿದ್ದು ನೆಲಕ್ಕೆ ವಾಲಿದೆ ಯಂತ್ರದಿಂದ ಭತ್ತದ ಕಟಾವು ಮಾಡಿಸಿದರೆ ಸಾಕಷ್ಟು ಸಮಯ ಹಿಡಿದು ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ.
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ನೋಂದಾಯಿತ. ದೆಹಲಿಯ ರೈತ ಸಂಘದ ಜಿಲ್ಲಾಧ್ಯಕ್ಷರಾದಂತ ದೊಡ್ಡ ಭರಮಣ್ಣ ಇವರು ಮಾತನಾಡಿ ಭತ್ತದ ಸಮೃದ್ಧ ಬೆಳೆ ಕೈ ಸೇರುವ ಹೊತ್ತಿಗೆ ಸುಗ್ಗಿಯ ಹಿಗ್ಗಿನಿಂದ ರಾಶಿಗಳನ್ನು ಮಾಡಬೇಕು ಎನ್ನುವ ಮನಸ್ಸಿಗೆ ಅಕಾಲಿಕವಾಗಿ ಸುರಿದ ಮಳೆರಾಯ ಮಣ್ಣು ಹಾಕಿದ. ತೆನೆಹೊತ್ತು ನಿಂತ ಪೈರು ನೀರು ಪಾಲಾದವು ಮುಂದೆ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂದು ರೈತರು ಮನಸಲ್ಲಿ ಮರುಗುತ್ತಿದ್ದಾರೆ, ಒಮ್ಮೊಮ್ಮೆ ಸುಮ್ಮನೆ ರೈತರಾಗಬಾರದು ಎಂದು ಅನ್ನಿಸುತ್ತಿತ್ತು ಕೃಷಿ ಬಿಟ್ಟು ಏನೂ ಗೊತ್ತಿರದ ಬದುಕು ನಮ್ಮದು ಭೂತಾಯಿಯ ಸೇವೆ ಮಾಡಲು ನಿಂತರೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಬೆಳೆ ಬರುವ ಸಮಯದಲ್ಲಿ ಮಳೆರಾಯನ ಮುನಿಸು ಸರಿದರೆ ಸರಿದು ಬಿಡು , ಜೀವನ ಸಾಗಿಸುವೆವು ವರುಣದೇವ ನೀ ಮಾಡು ಮನಸ್ಸು ಆಫೀಸುಗಳಲ್ಲಿ ಕುಳಿತು ಮಾತನಾಡುವ ಕೆಲ ಅಧಿಕಾರಿಗಳಿಗೆ ಏನು ಗೊತ್ತು ರೈತರ ಬದುಕು ? ರೈತರಿಗೆ ಬಂದು ಒದಗಿರುವ ವಿಪತ್ತು ಹಗಲು ರಾತ್ರಿ ಎನ್ನದೆ ಶ್ರಮಿಸಿದ ರೈತರ ಬದುಕಿಗೆ ಬಂತು ಕುತ್ತು ಆದ ನಷ್ಟಗಳನ್ನು ಒಮ್ಮೆ ಪರಿಶೀಲಿಸಿ ಪರಿಹಾರಗಳ ಮೂಲಕ ಕೈಹಿಡಿದು ಕಣ್ಣೀರು ಒರೆಸಿದರೆ ರೈತರಿಗೆ ಒಂದಿಷ್ಟು ಒಳಿತು ಆದೀತು ಮಳೆಯಿಂದ ನಷ್ಟವಾದ ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದಂತ ಶಿವರಾಜ್ ತಂಗಡಗಿ ಅವರು ಈ ಕೂಡಲೇ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರೈತರ ಸಂಘದ ಸದಸ್ಯರು ಹಾಗೂ ಸುತ್ತ ಮುತ್ತಲಿನ ರೈತ ಬಾಂಧವರು ಇದ್ದರು.
ವರದಿ ಹನುಮೇಶ ಭಾವಿಕಟ್ಟಿ



















