
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಶುಚಿಯಾದ ಆಹಾರ, ಸೋಲಾರ್ ಬಿಸಿ ನೀರು, ಸರಿಯಾದ ಪ್ರಮಾಣದ ಆಹಾರಕ್ಕಾಗಿ ಮೇಲ್ವಿಚಾರಕರಿಗೆ ಅಗ್ರಹಿಸಿದ ವಸತಿ ನಿಲಯದ ವಿಧ್ಯಾರ್ಥಿಗಳು.
ಗುರುಮಠಕಲ್: ಪಟ್ಟಣದ ಸರಕಾರಿ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ (ಎಸ್ಸಿ ಹಾಸ್ಟೆಲ್) ಸೋಮವಾರ ನ. 10 ರಂದು ಮಧ್ಯಾಹ್ನ ವಸತಿ ನಿಲಯದ ವಿಧ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಮಧ್ಯೆ ಊಟಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ ಹಾಗೂ ಊಟದ ಪ್ರಮಾಣ ಕಡಿಮೆ ಇರುವ ಕಾರಣ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ವಸತಿ ನಿಲಯದಲ್ಲಿ ಅಡುಗೆ ಮಾಡುವ ಸ್ಥಳದಲ್ಲಿ ಸ್ವಚ್ಛತೆಯ ಸಮಸ್ಯೆ ಇದ್ದು ಅದನ್ನು ಸರಿಪಡಿಸುವಂತೆ ಆಗ್ರಹಿಸಿದರು.
ವಸತಿ ನಿಲಯದ ಮೇಲ್ವಿಚಾರಕರಾದ ವೇಣುಗೋಪಾಲ್ ಮನ್ನೇ ಈ ಕುರಿತು ಅಡುಗೆ ಸಿಬ್ಬಂದಿಗೆ ಕಡ್ಡಾಯವಾಗಿ ಕೈ ಗ್ಲೌಸ್, ಸಮವಸ್ತ್ರ ಧರಿಸಿ ಸ್ವಚ್ಛವಾಗಿ ಅಡುಗೆ ಮಾಡಲು, ವಿಧ್ಯಾರ್ಥಿಗಳಿಗೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಅಡುಗೆ ಮಾಡಲು ಸೂಚನೆ ನೀಡಿದರು.
ಸೋಲಾರ್ ಬಿಸಿ ನೀರಿನ ಪ್ಯಾನಲ್ ರಿಪೇರಿ ಇನ್ನೆರಡು ದಿನಗಳಲ್ಲಿ ಸರಿಪಡಿಸುವುದಾಗಿ ತಿಳಿಸಿ, ಇನ್ನು ಮುಂದೆ ವಸತಿ ನಿಲಯದ ಕುರಿತಾಗಿ ಹೆಚ್ಚಿನ ಮುತುವರ್ಜಿ ವಹಿಸುವೆ ಎಂದು ತಿಳಿಸಿದರು.
ವಸತಿ ನಿಲಯದ ವಿಧ್ಯಾರ್ಥಿಗಳು ಹಾಗೂ ಜಯ ಕರ್ನಾಟಕ ಸಂಘಟನೆಯ ನಾಗೇಶ್ ಗದ್ದಗಿ, ರಾಮುಲು ಕೊಡಗಂಟಿ, ನರಸಿಂಹುಲು ಗಂಗನೊಳ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.




















