ಹಾವೇರಿ : ಕೇಂದ್ರ ಸರ್ಕಾರ ಬಜೆಟ್ ಮಂಡಿಸಿರುವುದು, ಮೋದಿ ಕ್ಯಾಬಿನೆಟ್ ಹಾಗೂ ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ರವರು ಹಾವೇರಿ ಜಿಲ್ಲೆಗೆ ಚೊಂಬಿನ ಕೊಡುಗೆ ನೀಡಿದ್ದಾರೆ, ಕೆಪಿಸಿಸಿ ಜಿಲ್ಲಾ ವಕ್ತಾರರು ಸಂಜಯಗಾಂಧಿ ಪು ಸಂಜೀವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸಾಮಾನ್ಯ ಜನರಿಗೆ ಕೂಲಿ ಕಾರ್ಮಿಕರಿಗೂ ಯಾವುದೇ ತರದಿಂದ ಲಾಭವಾಗಿಲ್ಲ ಹಾವೇರಿ ಜಿಲ್ಲೆಗೆ ಯಾವುದೇ ತರದಿಂದ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಬಜೆಟ್ಟಿನಲ್ಲಿ ಯಾವುದೇ ತರದ ಕೊಡುಗೆ ಇಲ್ಲ ಹಾವೇರಿ ಜಿಲ್ಲೆಗೆ ಚೊಂಬನ್ನು ಕೊಟ್ಟಿರುವ ಕೇಂದ್ರ ಸರ್ಕಾರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಕ್ಷೇತ್ರವಾಗಿರುವ ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವಿ ಜಾನಪದ ವಿಶ್ವವಿದ್ಯಾಲಯ ಕೆರಿಮತ್ತಿಹಳ್ಳಿಯ ವಿಶ್ವವಿದ್ಯಾಲಯಕ್ಕೆ ಹಾವೇರಿ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿಗೆ ಬಹು ನಿರೀಕ್ಷೆಯಲ್ಲಿ ಇಟ್ಟುಕೊಂಡಿರುವ ಹುಸಿಯಾಗಿದೆ ಹಾವೇರಿ ಜಿಲ್ಲೆಯಲ್ಲಿರುವ ವರದಾ ಮತ್ತು ತುಂಗಭದ್ರ ನದಿಯಲ್ಲಿರುವ ಹಾವನೂರ, ಮತ್ತು ಹೌಸಿ ,ಮತ್ತು ಶಾಕಾರ, ನೂರಾರು ಹಳ್ಳಿಗಳಿಗೆ ವಿದ್ಯಾರ್ಥಿಗಳಿಗೆ ರೈತರಿಗೆ ,ವಾಹನ ಸವಾರರಿಗೂ ಬ್ರಿಡ್ಜ್ ನಿರ್ಮಾಣಕ್ಕಾಗಿ ಹಣವನ್ನು ಮೀಸಲಿಡುತ್ತಾರೆ ಎಂಬುದು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆ ನಿರೀಕ್ಷೆ ಸುಳ್ಳಾಯಿತು, ಪುನಶ್ಚೇತನ ಆಗಬೇಕಾಗಿದ್ದ ಸೇತುವೆಗಳು ಹಾಲಗಿ ಮರೋಳ ಹೊಸರಿತ್ತಿ ಮತ್ತು ಕುರುಡೂರು ಕೋಡುಬಳ ಮತ್ತು ಮರಡೂರು ನೆಗಳೂರ ಮಧ್ಯ ಮತ್ತು ಹೊಸರಿತ್ತಿ , ವರದಾ ನದಿ ಬಿರ್ಚ್ ಬಗ್ಗೆ ಯಾವುದೇ ಸುಳಿವೇಇಲ್ಲ ,ರೈತರಿರಬಹುದು ಕೃಷಿ ಕ್ಷೇತ್ರಕ್ಕೆ ಇರಬಹುದು ವೈದ್ಯಕೀಯ ಕ್ಷೇತ್ರಕ್ಕೆ ಇರಬಹುದು ರಸ್ತೆ ಅಭಿವೃದ್ಧಿಗೆ ಇರಬಹುದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಆರೋಗ್ಯಕ್ಕೆ ಯಾವುದೇ ತರಹದ, ಸಾಮಾನ್ಯ ಹಾಗೂ ಬಡ ಕೂಲಿ ಕಾರ್ಮಿಕರಾಗಿ ಯಾವುದೇ ತರದ ಪ್ರಯೋಜನವೂ ಇಲ್ಲ ಮಹಿಳೆಯರು ಮತ್ತು ಬಡಜನರು ನಿರೀಕ್ಷೆ ನಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿರುವುದು ಕೇವಲ ಉದ್ಯಮಗಳಿಗೆ ಮತ್ತು ಶ್ರೀಮಂತರ ವರ್ಗದವರಿಗೆ ಮಾತ್ರ ಸೀಮಿತವಾಗಿದೆ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರರು ಡಾ. ಸಂಜಯಗಾಂಧಿ ಪು ಸಂಜೀವಣ್ಣನವರ ಅಸಮಾಧಾನ ವ್ಯಕ್ತಪಡಿಸಿದರು.
ವರದಿ ಬಸವರಾಜ ಎಸ್. ಎನ್.




















