ಕೊಟ್ಟೂರು : ಪಟ್ಟಣದ ಆರಾದ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಾಲಯದಲ್ಲಿ ಯುಗಾದಿ ಅಮಾವಾಸ್ಯೆ ದಿನದಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹಂಸಪ್ರಿಯ ನೃತ್ಯ ನಿಕೇತನ ವಿದ್ಯಾರ್ಥಿಗಳು ಭರತನಾಟ್ಯ ನೃತ್ಯದ ಮೂಲಕ ತಮ್ಮ ಕಲೆಯನ್ನು ಪ್ರದರ್ಶನ ನೀಡಿದರು. ನೃತ್ಯ ಗುರುಗಳಾದ ಶ್ರೀಮತಿ ಶೀಲಾ ಮಹಾದೇವ, ಹಂಸ ಇತರರು ಇದ್ದರು. ಕಲ್ಪತರು ಕಲಾ ಟ್ರಸ್ಟ್ ರಿ. ಕೊಟ್ಟೂರು ಚಿಗಟೇರಿ ಕೊಟ್ರೇಶಿ ಕಾರ್ಯಕ್ರಮ ನಡೆಸಿಕೊಟ್ಟು ಭರತನಾಟ್ಯ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು.
- ಕರುನಾಡ ಕಂದ ಪತ್ರಿಕೆ




















