ಬಸವಣ್ಣನು ಬೆಳಕಾದ ಭಕ್ತಿ ಮಾರ್ಗದ ದೀಪ,
ಮನದ ಮಲಿನ ತೊಡೆದನು ಮೃದು ಮಾತಿನ ತಾಪ।
ಕಾಯಕವೇ ಕೈಲಾಸವೆಂ ಕೃಷಿದು ಕರೆದ ಮಹಾತ್ಮ,
ಸತ್ಯದ ಸಾಗರದಲ್ಲಿ ಸಾಗಿದ ಸದಾತ್ಮ।
ವಚನಗಳ ಮೂಲಕ ಬೋಧಿಸಿದನು ಜೀವನ ಪಾಠ,
ಸಮಾನತೆ ಸಾರುತ್ತಾ ಸುಧಾರತೆಯ ಗಾಢ ಮಾತ।
ಜಾತಿ ಮತ ಬೇಧವಿಲ್ಲವೆಂದು ಹೇಳಿದ ಧೀರ,
ನ್ಯಾಯದ ನಿಲುವಿನಲ್ಲಿ ನಿಂತ ಮಹಾ ವೀರ।
ಅನ್ನದಾಸೋಹದ ದಾರಿಯಲ್ಲಿ ತೋರಿದನು ಬೆಳಕು,
ದೀನರ ದುರಿತ ನೀಗಿಸಿದನು ದಯೆಯ ಹೊಳಪು।
ಅಹಂಕಾರ ಅಳಿಸಿ ಆತ್ಮಜ್ಞಾನಕ್ಕೆ ತೋರಿದ ದಾರಿ,
ಸರಳತೆಯ ಸಾರವಿದು ಬಸವಣ್ಣನವರ ಹೊಗಳಿ ಹಾಡಿರಿ।
ಶರಣರ ಸಂಗದಲ್ಲಿ ಬೆಳಗಿದ ಆತ್ಮ ತೇಜ,
ಧರ್ಮದ ದೀಪವಿದು ಅವನ ಪಾವನ ಸೇವೆ।
ಮನದೊಳಗೆ ಮಿಂಚುವ ಮೌಲ್ಯಗಳ ನಕ್ಷತ್ರ,
ಬಸವಣ್ಣನ ಬೋಧನೆ ನಿತ್ಯವೂ ಅಮೃತ।
ಜೀವನಕ್ಕೆ ಜ್ಯೋತಿ ತುಂಬಿದ ಮಹಾನ್ ದಾರಿ,
ಬಸವಣ್ಣನೆಂದರೆ ಭಕ್ತಿಯ ಅಮೂಲ್ಯ ಸಿರಿ।
ನಮ್ಮೊಳಗೆ ನೆಲೆಸಲಿ ಅವನ ಮಹಾ ತತ್ತ್ವ,
ಬಸವಣ್ಣನ ಮಾರ್ಗವೇ ನಿಜವಾದ ಸತ್ವ।
- ಸುಜಾತಾ ಮಣ್ಣಿಕೇರಿ (ಸುಮ)
ನಾಗಪುರ. ಮಹಾರಾಷ್ಟ್ರ




















