ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವಗುರು ಬಸವಣ್ಣ.

ಜಯಗುರು ಬಸವ ಜಯಗುರು ಬಸವ
ಎಂದು ನಾನು ನಿತ್ಯ ನೆನೆಯುವೆ
ಮನವ ಶುದ್ಧ ಮಾಡಿ ಬೆಳಗು ಹೊತ್ತಲ್ಲಿ ಎದ್ದು ನಾನು ಕೈಯ ಮುಗಿದು ತಲೆಯ ಬಾಗಿ ಬಸವ ಎಂದು ನುಡಿಯುವೆ …..

ಬಸವಣ್ಣನೇ ಬಂಧು ಬಸವಣ್ಣನೇ ಬಳಗ
ಎಂದು ನಾನು ಅರಿಯಲು
ಅಂತರಂಗದಿ ಸ್ಮರಿಸಿಕೊಂಡು
ಬಸವ ನಿನ್ನ ಪಾದ ಪೂಜೆ ಮಾಡಲು
ಅರಿಷಡ್ವರ್ಗಗಳು ದೂರವಾಗಿ
ಭಾವ ಶುದ್ಧಿಯಾಯಿತು. ….

ನಿತ್ಯ ನಿನ್ನ ಜಪಿಸಲು
ನನ್ನ ಮೇಲೆ ನಿನ್ನ ಕರುಣೆ ತೋರಲು
ಹಸನು ಮನದಿ ನೆನೆಯಲು
ಸ್ವಾರ್ಥ ಭಾವ ಇಲ್ಲವಾಗಿ
ಬಸವ ಭಾವ ಮೂಡಲು
ಎಲ್ಲಿ ನೋಡಿದಲ್ಲಿ ನಿನ್ನ ವಚನವು ಕೇಳಲು….

ಬಸವಣ್ಣನ ವಚನಗಳು
ನಮ್ಮ ಬದುಕಿನ ಆಸ್ತಿಯು
ಅಜರಾಮರವಾಗಿ ಉಳಿಯಲಿ
ಗುರು ಬಸವಣ್ಣನ ಶಕ್ತಿಯು
ನಮ್ಮನು ಕಾಯಲಿ ಎಂದು ಬೇಡಲು
ಅವನ ಮೇಲಿಡಲು ನಮ್ಮ ಭಕ್ತಿಯು….

ಎಲ್ಲೆಡೆ ನಡೆಯಲಿ ಬಸವಣ್ಣನ ಸ್ಮರಣೆಯು
ಎಲ್ಲೆಡೆ ಮೊಳಗಲಿ ಬಸವಣ್ಣನ ಕೀರ್ತಿಯು
ಹುಟ್ಟು ಸಾವು ಜಗದ ನಿಯಮ ಅರಿಯಲು
ಲೌಕಿಕ ಬದುಕಲ್ಲಿ ನನ್ನ ನಾನು ಮರೆತೆನು
ನಾನು ನನ್ನದೆಂಬ ಸ್ವಾರ್ಥ ಬುದ್ಧಿಯಲಿ
ಬಸವಣ್ಣನ ನೆನಹು ಮರೆತು ಹೋದೆನು …..

  • ಅರುಣಕುಮಾರ ರಾಜಮಾನೆ.
    ಚಿನ್ಮಯ ನಿವಾಸ ಶಂಕರ ನಗರ ಅಥಣಿ.
    591304
    ತಾ. ಅಥಣಿ.
    ಜಿ. ಬೆಳಗಾವಿ.
    ಮೊ.ನಂ. 7259229697
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!