
ಬೆಳಗಾವಿ:ಅಥಣಿಯ ಮಣ್ಣಿಗೆ ಮತ್ತೊಂದು ಹೆಮ್ಮೆಯ ಕ್ಷಣ…
ಒಂದು ಸಾಮಾನ್ಯ ಮನೆಯ ಕನಸು ಇಂದು ಅಸಾಮಾನ್ಯ ಸಾಧನೆಯಾಗಿ ಅರಳಿದೆ.
J.A. PU ಕಾಲೇಜಿನ ದ್ವಿತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಶಿವಾನಂದ ಮುರಾಗೆಪ್ಪಾ ಬುರ್ಲಟ್ಟಿ… ಈ ಹೆಸರನ್ನು ಈಗ ಕೇವಲ ಒಂದು ಹೆಸರು ಅಂತ ಹೇಳೋದು ಕಷ್ಟ… ಇದು ಒಂದು ಪ್ರೇರಣೆ… ಒಂದು ಸಾಧನೆಯ ಪ್ರತೀಕ…
ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 595 ಅಂಕಗಳು… ಅಂದರೆ ಶೇಕಡಾ 99.16% ಫಲಿತಾಂಶ…!
ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ.
ಇದು ಕೇವಲ ಅಂಕಗಳ ಕಥೆ ಅಲ್ಲ…
ಇದು ಹಗಲು-ರಾತ್ರಿ ಪರಿಶ್ರಮದ ಕಥೆ…
ಇದು ಕನಸುಗಳನ್ನು ನಂಬಿದ ಹೃದಯದ ಜಯಗಾಥೆ…
ಪ್ರತಿ ಅಂಕದ ಹಿಂದೆ ಅವನ ಶ್ರಮ ಇದೆ…
ಪ್ರತಿ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲ ಇದೆ…
ಪ್ರತಿ ಹೆಜ್ಜೆಯಲ್ಲೂ ಶಿಕ್ಷಕರ ಮಾರ್ಗದರ್ಶನ ಇದೆ…
ಇಂದು ಶಿವಾನಂದನ ಸಾಧನೆ, ಅವನ ಮನೆಯವರ ಕಣ್ಣಲ್ಲಿ ಸಂತಸದ ಕಣ್ಣೀರನ್ನು ತಂದಿದೆ…
ಕಾಲೇಜಿನ ಪ್ರಾಂಗಣದಲ್ಲಿ ಹೆಮ್ಮೆಯ ನಗೆ ಮೂಡಿಸಿದೆ…
ಮತ್ತು ಅಥಣಿಯ ಪ್ರತಿಯೊಬ್ಬರ ಹೃದಯದಲ್ಲಿ ಗೌರವದ ಘಳಿಗೆಯನ್ನು ಸೃಷ್ಟಿಸಿದೆ…
ರಾಜ್ಯಕ್ಕೆ, ಜಿಲ್ಲೆಗೆ ಹಾಗೂ J.A. PU ಕಾಲೇಜಿಗೆ ಕೀರ್ತಿ ತಂದ ಶಿವಾನಂದನಿಗೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ…
ಇಂತಹ ಯುವ ಸಾಧಕರು ನಮ್ಮ ಸಮಾಜದ ಬೆಳಕು…
ಅವರ ಕನಸುಗಳು ಇನ್ನಷ್ಟು ಎತ್ತರಕ್ಕೆ ಹಾರಲಿ…
ಶಿವಾನಂದ… ನೀನು ಸಾಧಿಸಿದ್ದು ಕೇವಲ ಗೆಲುವಲ್ಲ…
ಇದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ದೀಪ…
ನಮ್ಮ ಕರುನಾಡ ಕಂದ ಪತ್ರಿಕೆಯ ವತಿಯಿಂದ ಕೂಡ ಈ ವಿದ್ಯಾರ್ಥಿಗೆ ಅಭಿನಂದನೆಗಳು.
ವರದಿ ವಿಠ್ಠಲ ಖೋಕಾಟೆ




















