ಸಿರುಗುಪ್ಪ- ನಗರದ ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಮೌಲಾನ ಅಬುಲ್ ಕಲಾಂ ಆಜಾದ್ ಪ್ರೌಢಶಾಲೆಯಲ್ಲಿ ಸಿರುಗುಪ್ಪ ತಾಲೂಕು ಈದ್ ಮೀಲಾದ್ ಉನ್ ನಬೀ ಕಮಿಟಿ ಸಹಯೋಗದಲ್ಲಿ ರಜಾ ದಿನಗಳ ಶಾಲಾ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಶಾಂತಿ ಸಹೋದರತೆ ಶಿಸ್ತು ಸ್ವಚ್ಛತೆ ಪರಿಸರ ನಿತ್ಯ ಜೀವನಕ್ಕೆ ಜ್ಞಾನ ಕೈ ಕಾಲು ಮುಖ ತೊಳೆಯುವ ವಜು ಸ್ನಾನ ಮಾಡುವ ಗುಸೂಲ್ ನಮಾಜ್ ಖುರಾನ್ ಹದೀಸ್ ದುಆ ಧಾರ್ಮಿಕವಾಗಿ ಸಂಸ್ಕಾರ ಹೊಸ ಹೊಸ ಕೌಶಲ್ಯ ಕ್ರೀಡಾ ಮನೋಭಾವನೆ ವಿವಿಧ ಮೊದಲಾದ ಹವ್ಯಾಸ ಶಿಕ್ಷಣದ ಮಹತ್ವ ಮಾನವೀಯ ಮೌಲ್ಯ ಬೇಸಿಗೆ ಶಿಬಿರಗಳಿಂದ ಮುದ್ದು ಮಕ್ಕಳ ಮನಸ್ಸು ಅರಳುವುದು ಎಂದು ರಾಷ್ಟ್ರೀಯ ಸಾಕ್ಷರತಾ ಶಿಕ್ಷಣ ಪ್ರೇಮಿ ಶಾಂತಿ ಸಭೆ ಸದಸ್ಯರಾದ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ಅಭಿಪ್ರಾಯಪಟ್ಟರು.
ತಾಲೂಕು ಈದ್ ಮೀಲಾದ್ ಕಮೀಟಿಯ ಗೌರವ ಅಧ್ಯಕ್ಷರು ನಗರಸಭೆ ಮಾಜಿ ಸದಸ್ಯರು ಹಾಜಿ ಚೌದ್ರಿ ಖಾಜಾಸಾಬ್, ಈದ್ ಮಿಲಾದ್ ನಬೀ ಕಮೀಟಿಯ ಅಧ್ಯಕ್ಷರು ಇನಾಯತ್, ಉಪಾಧ್ಯಕ್ಷರು ಮುಲ್ಲಾ ದಾದಾ ಖಲಂದರ್, ಕಾರ್ಯಕಾರಿ ಸದಸ್ಯರಾದ ಟೈಲರ್ ಜಿ.ಖಾಜಾ ಸಾಬ್, ಅನ್ಸಾರಿ ಅನ್ಸರ್, ಶರ್ತಿ ಶಬ್ಬೀರ್, ಹಂಡಿ ಹುಸೇನ್, ಹೆಚ್. ಶಾಶವಲಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಷದ್ ಅಲಿ ಅವರ ಸಮ್ಮುಖದಲ್ಲಿ ವಲ್ಲೂರ್ ಮಜೀದ್ ಖತಿಬೋ ಇಮಾಮ್ ದಾವೂದ್, ಹಾಫೀಜ್ ಮೊಹಮ್ಮದ್ ಶರೀಫ್ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಧಾರ್ಮಿಕ ವಿಧಿ ವಿಧಾನ ಬೋಧನೆ ಉಚಿತವಾಗಿ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುದ್ದು ಮಕ್ಕಳಿಗೆ ಉಪನ್ಯಾಸ ಆರಂಭದಲ್ಲಿ ಖುರಾನ್ ಫಾತೇಹಾ ಓದಿಕೆ ಸಲಾತೋ ಸಲಾಂ ದುವಾದೊಂದಿಗೆ ಪ್ರಸಾದ ವಿತರಿಸಲಾಯಿತು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















