ಬೀದರ್/ ಬಸವಕಲ್ಯಾಣ ನಗರದದಲ್ಲಿ ಮಹಾ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಎಂದು ಖ್ಯಾತಿ ಪಡೆದ ಮಹಾತ್ಮಾ ಬಸವೇಶ್ವರರ ಮತ್ತು ಶ್ರೀ ಶಿವಶರಣ ನೂಲಿಯ ಚಂದಯ್ಯನವರ ಜಾತ್ರೆ ಮೂರು ದಿವಸ ಕಾಲ ನಡೆಯಲಿದ್ದು, ಈ ಒಂದು ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ನಗರದಲ್ಲಿ ಸ್ವಚ್ಚತೆ ಕಾಪಾಡುವ ಸಲುವಾಗಿ ನಗರದ ಎಲ್ಲಾ ಮಾಂಸದ ಅಂಗಡಿಗಳ ಮಾಲಿಕರಿಗೆ ನಗರಸಭೆ ಪೌರಾಯುಕ್ತರು ಸಭೆ ಕರೆದು ನೋಟಿಸ್ ಕೊಟ್ಟು ಮೂರು ದಿವಸ ಮಾಂಸದ ಅಂಗಡಿಯನ್ನು ಮುಚ್ಚಿಸಲು ತಿಳಿಸಬೇಕು. ಒಂದು ವೇಳೆ ನಿಮ್ಮ ಆದೇಶ ಕೇಳದಿದ್ದಲ್ಲಿ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಧನರಾಜ ಡಿ. ರಾಜೋಳೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















