ಸಜ್ಜನರೆ ಸಾಧಕರಿಗೆ ಅಭಿನಂದಿಸಲು ಬಯಸುವಿರಾ
ನಿಸರ್ಗ ಪಕಳೆಗಳಲಿ ತಯಾರಿಸಿದ್ದು ನಂಬುವಿರಾ
ಆಪ್ತರ ಮನಸೆಳೆವ ಸರಳವಾದ ಗುಚ್ಛ ಖರೀದಿಸುವಿರಾ
ಹಣಕ್ಕಾಗಿ ಅಲ್ಲ ಗೌರವದ ವಿಶ್ವಾಸಕ್ಕಾಗಿ ಸ್ವೀಕರಿಸುವಿರಾ
ನಲ್ಮುಂಜಾವಲಿ ಬರುತಿದೆ ತಾವಿರುವಲ್ಲಿಗೆ
ಸುಲಲಿತ ಕಾವ್ಯ ಚಿತ್ತಾರವಾಗಿ ಮೆಲ್ಲ ಮೆಲ್ಲಗೆ
ಕರಚಾಚಿ ಸ್ವೀಕರಿಸಿ ಧನ್ಯತಾ ನಮನಗಳೊಂದಿಗೆ
ಸಾರ್ಥಕತೆಯು ಎನ್ನ ಸೃಜನಶೀಲ ಕ್ರಿಯಾಶೀಲತೆಗೆ
- ಲಲಿತಾ ಕೆ ಆಚಾರ್ ಬೆಂಗಳೂರು




















