ಕಂಪ್ಲಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಸದರ ಅನುದಾನದಲ್ಲಿ ಮಂಜೂರಾದ ಸುಮಾರು 1.40ಲಕ್ಷ ಮೌಲ್ಯದ ತ್ರಿಚಕ್ರ ವಾಹನವನ್ನು ವಿಶೇಷ ಚೇತನ ಎಂ.ಎಂ.ಶರಣಬಸವರಾಜ ಇವರಿಗೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಇವರು ಬುಧವಾರ ವಿತರಿಸಿದರು.
ಅಂಗವಿಕಲರ ಓಡಾಟದ ಅನುಕೂಲಕ್ಕಾಗಿ ಸರ್ಕಾರ ಉಚಿತವಾಗಿ ನೀಡುವ ತ್ರಿಚಕ್ರ ವಾಹನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಮತ್ತು ಜಾಗರೂಕತೆಯಿಂದ ಚಲಾಯಿಸಬೇಕು. ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ. ಅಂಗವಿಕಲರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬೋಣ ಎಂದು ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಪುನರ್ವಸತಿ (ವಿಆರ್ಡಬ್ಲ್ಯೂ) ಕಾರ್ಯಕರ್ತ ಜಿ.ರಮೇಶ, ಪುರಸಭೆ ಸಿಬ್ಬಂದಿಗಳಾದ ಆನಂದ, ನಾಗರಾಜ, ಜ್ಯೋತಿ, ರೇಣುಕಾ, ರೋಜಾ, ತಾ.ಪಂ ಕಂಪ್ಯೂಟರ್ ಆಪರೇಟರ್ ಚಂದ್ರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















