
ಹೊನ್ನಾವರ ಪಟ್ಟಣದ ಬಸ್ಸ್ಟ್ಯಾಂಡ್ ಹೃದಯ ಭಾಗದಲ್ಲಿರುವ ಕಿಂತಲಕೇರಿ ಮಾರ್ಗವಾಗಿ ಸಾಗುವ ತಿರುವಿನ ರಸ್ತೆ ಅನೇಕ ವರ್ಷಗಳಿಂದ ಅಪಘಾತಗಳಿಗೆ ಕಾರಣವಾಗಿತ್ತು. ಸಾರ್ವಜನಿಕರ ಸುರಕ್ಷತೆ ಗಂಭೀರ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ, ಕರುನಾಡ ವಿಜಯ ಸೇನೆ ಕಳೆದ ನಾಲ್ಕು ವರ್ಷಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ರಸ್ತೆ ದುರಸ್ಥಿಗಾಗಿ ಹೋರಾಟ ಆರಂಭಿಸಿತ್ತು.
ಸಂಘಟನೆಯ ನಿರಂತರ ಒತ್ತಾಯ ಮತ್ತು ಹೋರಾಟದ ಫಲವಾಗಿ, 2026ರಲ್ಲಿ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡಿದ್ದು, ರಸ್ತೆ ದುರಸ್ತಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಸ್ತೆ ತಿರುವಿನ ಅಪಘಾತ ವಲಯದಲ್ಲಿ ಹಂಪ್ ಹಾಕಲಾಗಿದ್ದು ಇದನ್ನು ಹೋರಾಟದ ತಾತ್ಕಾಲಿಕ ಜಯವೆಂದು ಪರಿಗಣಿಸಲಾಗಿದೆ.
ಆದರೆ, ಶಾಶ್ವತ ಪರಿಹಾರಕ್ಕಾಗಿ ಇನ್ನೂ ಹೆಚ್ಚಿನ ಕ್ರಮ ಅಗತ್ಯವಿದೆ ಎಂದು ಸಂಘಟನೆ ತಿಳಿಸಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು ಎಂಬುದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















