
ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಐತಿಹಾಸಿಕ ಭರ್ಜರಿ ಗೆಲುವು
ಪಂಚ ಗ್ಯಾರಂಟಿ ಯೋಜನೆಯ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತಂದು ಅಭಿವೃದ್ಧಿಯ ಪಥದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಾಗಲಕೋಟೆ, ದಾವಣಗೆರೆ ವಿಧಾನಸಭಾ ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ. ಜನಮನ ಗೆದ್ದು ಜಯದ ಹಾದಿಯಲ್ಲಿ ಸಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನಪ್ರಿಯ ಶಾಸಕರಾದ ಯಾಸೀರ್ ಅಹಮದ್ ಖಾನ್ ಪಠಾಣ್ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಜನರ ವಿಶ್ವಾಸಕ್ಕೆ ಸಿಕ್ಕ ಭರ್ಜರಿ ಪ್ರತಿಫಲ ಇದು, ಯುವ ನಾಯಕತ್ವದ ಶಕ್ತಿ ಮತ್ತೆ ಸಾಬೀತು ಆಗಿದೆ ಈ ವಿಜಯ ಅಭಿವೃದ್ಧಿ ನ್ಯಾಯಮತ ಪ್ರಗತಿಯ ಹೊಸ ಅಧ್ಯಾಯ ಆರಂಭಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಚುನಾವಣೆ ಎರಡು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವ್ ಸವಣೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳು ಸೇರಿ ಶಿಗ್ಗಾವ್ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವಿಜಯೋತ್ಸವದಲ್ಲಿ ಶ್ರೀ ಗುಂಡಪ್ಪ ಜಲದೇ ಅಧ್ಯಕ್ಷರು ಶಿಗ್ಗಾವ್ ಬ್ಲಾಕ್ ಕಾಂಗ್ರೆಸ್, ಶ್ರೀ ರಮೇಶ್ ದುರ್ಗಪ್ಪ ಹರಿಜನ್ ಅಧ್ಯಕ್ಷರು ಸವಣೂರು ಬ್ಲಾಕ್ ಕಾಂಗ್ರೆಸ್,
ಶಿಗ್ಗಾಂವ ಕಾಂಗ್ರೇಸ್ ಮುಖಂಡರು ಮಕ್ಬೂಲ ಅಹ್ಮದಖಾನ ಪಠಾಣ, ಶಿಗ್ಗಾಂವ ಕಾಂಗ್ರೇಸ್ ಬ್ಲಾಕ ಅಧ್ಯಕ್ಷರು ಗುಡ್ಡಪ್ಪ ಜಲದಿ, ಗ್ಯಾರಂಟಿ ಸಮಿತಿ ಅಧ್ಯಕ್ಷರು ಎಸ್ ಎಫ ಮನಕಟ್ಟಿ, ಸವಣೂರ ಬ್ಲಾಕ ಅಧ್ಯಕ್ಷರು ರಮೇಶ ಹರಿಜನ, ಶಿಗ್ಗಾಂವ ಪುರಸಭೆ ಸದಸ್ಯರು ಗೌಸಖಾನ ಮುನಶಿ, ಶಿಗ್ಗಾಂವ ಶಹರ ಘಟಕ ಅಧ್ಯಕ್ಷರು ಚಂದ್ರಣ್ಣ ಕೊಡ್ಲಿವಾಡ, ಜಿಲ್ಲಾ ಕಾಂಗ್ರೇಸ್ ಮಹಿಳಾ ಅಧ್ಯಕ್ಷರು ಪ್ರೇಮಾ ಪಾಟೀಲ, ಬ್ಲಾಕ ಕಾಂಗ್ರೇಸ ಅಧ್ಯಕ್ಷರು ಮಲ್ಲಮ್ಮ ಸೋಮನಕಟ್ಟಿ, ಲಕ್ಷ್ಮಿ ಕಟ್ಟಿಮನಿ, ಕಾಂಗ್ರೆಸ್ ಪಕ್ಷದ ಮುಂಖಂಡರಾದ ರಮೇಶ ದುಗ್ಗತ್ತಿ, ಮಲ್ಲಿಕಾರ್ಜುನ ಗೌಡ ಪಾಟೀಲ, ಚಂದ್ರು ಹೆಬ್ಬಾಳ, ಅಣ್ಣಪ್ಪ ಲಮಾಣಿ, ಬಾಬಾರ ಬೊವಾಜಿ, ಮಾಂತೇಶ ಸಾಲಿ, ಮಹೇಶ್ ಅಪ್ಪಣ್ಣನವರ, ಇಸಾಕ ಜಕ್ಕಿನಕಟ್ಟಿ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ ಬಸವರಾಜ ಎಸ್. ಎನ್.



















