ಬಾಗಲಕೋಟೆ : ವಿಶ್ವದ ಪ್ರಸಿದ್ದ ನಾಟಕಕಾರರ ಪೈಕಿ ಷೇಕ್ಸಪಿಯರ್ ತನ್ನ ಬರಹಗಳ ಮೂಲಕ ಮನ್ನಣೆ ಪಡೆದ ಬರಹಗಾರರಾಗಿದ್ದಾರೆ. ವಿಲಿಯಂ ಷೇಕ್ಸಪಿಯರ್ ಕೇವಲ ಒಂದು ಕಾಲಕ್ಕೆ ಸಂಬಂಧಿಸಿದವರಲ್ಲ ಅವರೂ ಎಲ್ಲಾ ಕಾಲಕ್ಕೂ ಸಂಬಂಧಿಸಿದವರು ಎಲ್ಲ ಕಾಲಕ್ಕೂ ಸಲ್ಲುವ ಶ್ರೇಷ್ಠ ಬರಹಗಾರರು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಡೋಣೂರ ಹೇಳಿದರು. ಸಾಹಿತ್ಯ ಅಕಾಡೆಮಿ ನವದೆಹಲಿ, ಧಾರಾವಾಡ ಕಟ್ಟೆ ಧಾರವಾಡ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ ಇವುಗಳ ಸಹಯೋಗದಲ್ಲಿ ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ವಿಲಿಯಂ ಷೇಕ್ಸಪೀಯರ್ನಾಟಕಗಳ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂಗ್ಲೀಷ ಭಾಷೆಯನ್ನು ಸುಧಾರಿಸಿಕೊಳ್ಳಲು ವಿದ್ಯಾರ್ಥಿಗಳು ಷೇಕ್ಸಪೀಯರ್ ಅವರ ನಾಟಕಗಳನ್ನು ಓದಬೇಕು ಎಂದು ಹೇಳೀದರು.
ಸಮಾರಂಭದಲ್ಲಿ ಭಾಗಿಯಾಗಿದ್ದ ಡಾ. ಮಲ್ಲಿಕಾರ್ಜುನ ಸಜ್ಜನರ ಷೇಕ್ಸಪಿಯರ್ ಅವರ ೧೦ ದುರಂತ ನಾಟಕಗಳು ವಿಭಿನ್ನ ಕಥಾ ವಸ್ತುಹೊಂದಿದ ನಾಟಕಗಳಾಗಿವೆ. ಅವು ಮನುಕುಲಕ್ಕೆ ಪಾತ್ರಗಳ ಮೂಲಕ ಉತ್ತಮ ಸಂದೇಶ ತಿಳುವಳಿಕೆಯನ್ನು ಮೂಡಿಸುತ್ತವೆ ಎಂದು ಹೇಳಿದರು. ಕನ್ನಡ ಸಲಹಾ ಸಮಿತಿ ಸಾಹಿತ್ಯ ಅಕಾಡೆಮಿ ನವದೆಹಲಿಯ ಸದಸ್ಯರಾದ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸ್ವಾಗತಿಸಿದರು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಆರ್ ಮೂಗನೂರಮಠ ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿದ್ದರು.ಡಾ.ಎಮ್.ಎಮ್. ಮೇಟಿ ನಿರೂಪಿಸಿದರು. ಪ್ರೊ.ಎಸ್.ಎಮ್ ಚಿಮ್ಮಲಗಿ ವಂದಿಸಿದರು.ಕಾಲೇಜಿನ ಐಕ್ಯೂಎಸಿ ಘಟಕದ ಅಪ್ಪು ರಾಠೋಡ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿವರ್ಗ ಇಂಗ್ಲೀಷ ಹಾಗೂ ಕನ್ನಡ ಸ್ನಾತ್ತಕೋತ್ತರ ವಿಭಾಗದ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
- ಕರುನಾಡ ಕಂದ ಪತ್ರಿಕೆ




















