ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಕಟ್ಟಿದ ಕನಸು ಕಣ್ಣಲ್ಲಿ”

ಬಯಸಿದ ಭಾಗ್ಯ ಬಾಳಲ್ಲಿ
ಕಾಲಚಕ್ರ ಉರುಳುತ್ತಿದೆ ಜಗದಲ್ಲಿ
ನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ.

ಬಡತನವಿದ್ದರೂ ಬದುಕಲ್ಲಿ
ನೆಮ್ಮದಿಯಿರಲಿ ಬಾಳ ಪಯಣದಲ್ಲಿ
ಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ.

ಸುಖವು ಬಾಳ ಬಂಡಿಯಲ್ಲಿ
ದುಗುಡ ದುಮ್ಮಾನ ಕಾಲಡಿಯಲ್ಲಿ
ಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ.

ಕಟ್ಟಿದ ಕನಸು ಕಣ್ಣಲ್ಲಿ
ಗುರಿ ಮುಟ್ಟಲಿ ಬಡ ಬದುಕಿನಲ್ಲಿ
ಹೊಸರಾಗ ಮೂಡಲಿ ಹೊಸ ಹಾಡಲ್ಲಿ.

ಹೊಸ ಚಿಗುರು ಹಳೆ ಬೇರಿನಲ್ಲಿ
ಹಸಿವು ಹಿಂಗದು ಹಸಿದ ಹೊಟ್ಟೆಯಲ್ಲಿ
ದುಡಿದು ತಿನ್ನುವ ಬಲವಿದ್ದರೂ ರಟ್ಟೆಯಲ್ಲಿ.

ಮನಸಿಲ್ಲದ ಮನಸ್ಸಿನಲ್ಲಿ
ತಿಂದುಂಬುವುದು ಹಗಲುಗನಸಿನಲ್ಲಿ
ನೇಸರನ ಕಾಣುವಾಸೆ ಕಾರ್ಗತ್ತಲಿರುಳಿನಲ್ಲಿ.

ವರವ ಬೇಡುವುದು ಮಹಾದೇವನಲ್ಲಿ
ಕಳವಿ ತುಂಬುವುದು ಹರಿದ ಗೋಣಿಯಲ್ಲಿ
ಬೀಜ ಬಿತ್ತುವುದು ಎದೆ ಬಿರಿದ ಭೂಮಿಯಲ್ಲಿ.

  • ಡಾ. ಅಶೋಕ ಕುಮಾರ ಎಸ್. ಮಟ್ಟಿ ಮೀನಕೇರಿ.ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!