ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಭೋವಿ ವಡ್ಡರ್ ಸಮಾಜದ ಆರಾಧ್ಯ ದೇವತೆಗಳಾದ ಶ್ರೀ ಹುಲಿಗೆಮ್ಮ ದೇವಿ, ಶ್ರೀ ಗದ್ದೆಮ್ಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ದಿ.12-5-2026 ರ ಮಂಗಳವಾರ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಸಕಲ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಕತ್ರಿ ಬಜಾರ್ ಪಂಚಶೀ ದರ್ಗಾ ಮಾರ್ಗವಾಗಿ ಭೋವಿ ವಡ್ಡರ್ ನಗರದಲ್ಲಿರುವ ದೇವಸ್ಥಾನದವರೆಗೆ ಸಾಗಿ ದೇವಿ ಗರ್ಭಗುಡಿ ಪ್ರವೇಶಿಸಿದಳು. ಮೆರವಣಿಗೆಯಲ್ಲಿ ಭೋವಿ ವಡ್ಡರ್ ಸಮಾಜದ ಅಧ್ಯಕ್ಷ ಹನುಮಂತ ಕಟ್ಟಿಮನಿ, ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ್ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ದ್ಯಾವಪ್ಪ ಕುಚಬಾಳ, ಅಧ್ಯಕ್ಷ ಶ್ರೀನಿವಾಸ್ ಕುಲಕರ್ಣಿ, ಉಪಾಧ್ಯಕ್ಷ ಶ್ರೀಕಾಂತ್ ಚಿಂಚೋಳಿ, ಕಾರ್ಯದರ್ಶಿ ಪ್ರಕಾಶ್ ಕುಚಬಾಳ, ಪ್ರಧಾನ ಕಾರ್ಯದರ್ಶಿ ಬಿ ಎಮ್ ಶಿ ಕಾರಕೊರ, ಸಂಚಾಲಕ ಶಿವರಾಜ್ ಬಳವಾಟ, ಸಂಘಟನಾ ಕಾರ್ಯದರ್ಶಿ ದೇವಪ್ಪ ಕಟ್ಟಿಮನಿ, ಖಜಾಂಚಿ ನಾಗರಾಜ್ ಹಾದಿಮನಿ ಸೇರಿದಂತೆ ಪ್ರಮುಖರಾದ ನಾಗಪ್ಪ ಬಲವಾಟ, ದುರ್ಗಪ್ಪ ಕುಲಕರ್ಣಿ, ಹುಲಿಗೆಪ್ಪ ಕಟ್ಟಿಮನಿ, ದೇವಪ್ಪ ಕಟ್ಟಿಮನಿ, ದೌಲಪ್ಪ ಕಟ್ಟಿಮನಿ, ನಿವೃತ್ತ ಶಿಕ್ಷಕ ಎಚ್ಎನ್ ಕಟ್ಟಿಮನಿ , ಶಿಕ್ಷಕ ಆನಂದ್ ಡಿ ಕಟ್ಟಿಮನಿ, ತಿಪ್ಪಣ್ಣ ಹಗಟಗಿ, ಭೀಮಪ್ಪ ನಾಲತವಾಡ, ಸಾಯಿಬಣ್ಣ ಢವಳಗಿ, ದುರ್ಗಪ್ಪ ಕರ್ಕೂರ, ದುರ್ಗಪ್ಪ ಹಾದಿಮನಿ, ಯಮನಪ್ಪ ಕುಚಬಾಳ, ಹನುಮಂತ ಬಂಡಿ ವಡ್ಡರ್, ಬಸಪ್ಪ ಡವಳಗಿ, ಬಸವರಾಜ್ ಕಟ್ಟಿಮನಿ, ಭೀಮಶಿ ಹಗಟಗಿ, ಮಾಶಪ್ಪ ಕಾರ್ಕೂರ್, ರಾಜು ಹಗಟಗಿ ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ವರದಿ ನಜೀರ್ ಚೋರಗಸ್ತಿ




















