ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಶ್ರೀ ಬಸವೇಶ್ವರ, ನೀಲಮ್ಮನವರ ಜೋಡಿ ರಥದ ಗೊಂಬೆ, ಬಾಗಿಲ್ವಾಡಗಳ ದುರಸ್ತಿ ಕಾರ್ಯ ಆರಂಭ

ಬಳ್ಳಾರಿ / ಕಂಪ್ಲಿ : ಪೇಟೆ ಬಸವೇಶ್ವರ ನೀಲಮ್ಮನವರ ದೇವಸ್ಥಾನ ಕಂಪ್ಲಿ ಪಟ್ಟಣದ ಪ್ರಮುಖ ಆರಾಧ್ಯ ದೈವವಾಗಿದ್ದು, ಇಲ್ಲಿನ ಜೋಡಿ ರಥೋತ್ಸವ ಅತ್ಯಂತ ಪ್ರಸಿದ್ಧಿಯಾಗಿದೆ.
ಪಟ್ಟಣದ ಆರಾಧ್ಯ ದೈವ ಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ರಥದ ಗೊಂಬೆ, ಬಾಗಿಲ್ವಾಡಗಳ ದುರಸ್ತಿ ಕಾರ್ಯದಲ್ಲಿ ಸ್ಥಳೀಯ ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲಾವಿದರ ಕುಟುಂಬದ ಸದಸ್ಯರು ತೊಡಗಿಕೊಂಡಿದ್ದಾರೆ.
ಎರಡು ರಥಗಳ ಬಾಗಿಲ್ವಾಡ, (ರಥದ ಪ್ರವೇಶ ದ್ವಾರದ ಚೌಕಟ್ಟುಗಳು) ಗೊಂಬೆ, ಸಿಂಹ, ಪಟ, ಡುಬುರಿಗಳ ಜೊತೆಗೆ ನಂದಿ, ರಾವಣ, ಇಬ್ಬರು ದ್ವಾರಪಾಲಕರ ದುರಸ್ತಿ ಭರದಿಂದ ಸಾಗಿದೆ. ಕಟ್ಟಿಗೆ ಪುಡಿ, ಹುಣಸೆಬೀಜದ ಅಂಬಲಿ (ಸರಿ), ಗೋಣಿ ತಟ್ಟಿನ ನಾರು ಸೇರಿ ಅಂಟು ತಯಾರಿಸಿ ದುರಸ್ತಿ ಮಾಡಲಾಗುತ್ತಿದೆ.

ನಂತರ, ಗೊಂಬೆಗಳ ಆಕಾರ ತಿದ್ದಿಕೊಂಡು ಬಟ್ಟೆ ಲೇಪಿಸಿ ಬಳಿಕ ವಿಭೂತಿ, ಹುಣಸೆಬೀಜದ ಅಂಬಲಿ(ಸರಿ)ಯನ್ನು ಮೂರು ಸಲಲೇಪನ ಮಾಡಿ ಶುದ್ಧಗೊಳಿಸಲಾಗುವುದು. ತದನಂತರ ಬಣ್ಣಲೇಪನಗೊಳಿಸಲಾಗುತ್ತದೆ. ಈ ಎಲ್ಲಾ ಕಾರ್ಯಗಳು ನಾಲೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಅಧ್ಯಕ್ಷೆ ಸುಮಿತ್ರಮ್ಮಚಿತ್ರಗಾರ ವಿವರಿಸಿದರು.

ಗೊಂಬೆಗಳ ದುರಸ್ತಿಯಲ್ಲಿ ಪರಶುರಾಮಪ್ಪ ಚಿತ್ರಗಾರ ಕುಟುಂಬದ ರಾಮಕೃಷ್ಣ, ಲಕ್ಷ್ಮಿ, ಸಂಗೀತಾ, ಸ್ವಪ್ನಾ, ಶೃತಿ, ರಾಮಚಂದ್ರ, ರವಿ, ರಾಜಾರಾಮ್, ಪ್ರಕಾಶ್, ಸುಮಂತ್ ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!