ಬಳ್ಳಾರಿ / ಕಂಪ್ಲಿ: ಸಸಿ ಮತ್ತು ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯ ಎಂದು ಮುಖ್ಯಗುರು ಹನುಮಂತಪ್ಪ ಹೇಳಿದರು.
ಪಟ್ಟಣದ ಸಕ್ಕರೆ ಕಾರ್ಖಾನೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಅಂಗವಾಗಿ ಸಿಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಗಿಡ ಮರಗಳನ್ನು ನಾಶವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಭೂಮಿ ಮತ್ತು ಪರಿಸರ ಮನುಕಲಕ್ಕೆ ಒಳೆಯದನ್ನು ಮಾಡುತ್ತದೆ. ಪರಸರ ಸಂರಕ್ಷಣೆ ಮಾಡುವುದು ಮನುಕುಲದಿಂದ ಮಾತ್ರ ಸಾಧ್ಯ. ಗಿಡ ಮರಗಳಿಂದ ಮಳೆ, ತಂಪಾದ ಗಾಳಿ ಇವೇಲ್ಲವು ನಿಸರ್ಗದ ಕೊಡುಗೆಯಾಗಿದೆ. ಗಿಡಮರಗಳನ್ನು ಕಡಿಯದಂತೆ ಎಚ್ಚರವಹಿಸಿ ಅವುಗಳನ್ನು ಕಾಪಾಡಿ ಪ್ರತಿಯೊಬ್ಬರ ಮನೆಯ ಮುಂದೆ ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋ಼ಷಣೆ ಮಾಡಿ ಯುವಕರಿಗೆ ಮತ್ತು ನಾಗರಿಕರಿಗೆ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಿಆರ್ಸಿಗಳಾದ ಗಂಗಾಧರ್, ಭೋಮೇಶ, ಸಹ ಶಿಕ್ಷಕರಾದ ಪ್ರಭಕರ್, ಐ.ಗಂಗಮ್ಮ, ರೇಣುಕಾ, ರಹಿಮತ್ ಬಿ, ವಾಣಿ, ಪ್ರೀತಿ, ತಿಪ್ಪಮ್ಮ, ಗೌರಮ್ಮ ಸೇರಿದಂತೆ ಶಾಲಾ ಮಕ್ಕಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















