ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ ಚವ್ಹಾಣ ಮಾತನಾಡಿ ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಶುದ್ದವಾತವರಣ ಹಾಗೂ ಶುದ್ದ ಗಾಳಿ ಪಡಯಬಹುದು ಉತ್ತಮ ಪರಿಸರ ನಿರ್ಮಾಣಕ್ಕಾಗಿ ಗಿಡಮರಗಳನ್ನು ನೆಡೋಣ ಎಂದರು.
ಹನುಮೇಶ ಮಾತನಾಡಿ ಪ್ರಕೃತಿ ನಮಗೆ ಸಾಕಷ್ಟೂ ನೀಡಿದೆ ಆದರೆ ಪ್ರಕೃತಿಗೆ ನಾವು ಏನಾದೂ ನೀಡಬೇಕು ಅದಕ್ಕೊಸ್ಕರ ನಮಗೆ ಸಮಯ ಸಿಕ್ಕಾಗ ಎಲ್ಲಾ ಗಿಡ ನೆಡೊಣ ಹಾಗೂ ಶುಭ ಸಮಾರಂಭಕ್ಕೆ ಗಿಡಗಳನ್ನು ಉಡುಗೊರೆಯಾಗಿ ನೀಡೋಣ ಎಂದರು.
ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ನಾಲ್ಕು ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆಯಲ್ಲಿ ಡಣಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ ಚವ್ಹಾಣ, ಶಿಕ್ಷಕರಾದ ಚಂದ್ರಶೇಖರ ಜಾಪಳ ,ಕೋಟೆಪ್ಪ ಜಿ, ಸಿದ್ದಲಿಂಗೇಶ್ವರ, ಅಯ್ಯನಗೌಡ , ಚನ್ನಬಸಪ್ಪ , ಸೈಯದ್ ಸನಾವುಲ್ಲಾ ಖಾನ್ , ಮಾಲತೇಶ ,ಸುಮಲತಾ , ಗಂಗಮ್ಮ , ಗ್ರಾಮದ ಹಸಿರು ಬಳಗ ಸದಸ್ಯರಾದ ,ರಾಘವೇಂದ್ರ ,ನಿಂಗರಾಜ ಪಂಪಾ, ಬಸವರಾಜ, ಮಂಜು, ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ




















