
ನಂಜನಗೂಡು : ಐಟಿಸಿ ಲಿಮಿಟೆಡ್ ಹಾಗೂ ಪ್ರಥಮ್ ಎಜುಕೇಶನ್ ಸಂಯುಕ್ತ ಆಶ್ರಯದಲ್ಲಿ ನಂಜನಗೂಡು ಕ್ಷೇತ್ರ ಸಂಪನ್ಮೂಲ ಕಚೇರಿಯ ಸಭಾಂಗಣದಲ್ಲಿ ಸಮುದಾಯ ಅಭಿವೃದ್ಧಿ ಗ್ರಂಥಾಲಯ ಕಿಟ್ ವಿತರಣಾ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಹೂವಿನ ಗಿಡಕ್ಕೆ ನೀರರೆದು ಟೇಪ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್ ಅವರು ಐಟಿಸಿ ಮತ್ತು ಪ್ರಥಮ್ ಸಂಸ್ಥೆಯು ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ನೀಡುತ್ತಿದೆ, ಹಲವು ಶಾಲೆಗಳಿಗೆ ಶಿಕ್ಷಕರನ್ನು ನೀಡುವುದರ ಜೊತೆಗೆ ಹಳ್ಳಿಗಳಲ್ಲಿ ಗ್ರಂಥಾಲಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಿದೆ ಎಂದರು.
34 ಹಳ್ಳಿಗಳ, 35 ಶಾಲೆಗಳ,
42 ತಾಯಂದಿರಿಗೆ ಗ್ರಂಥಾಲಯ ಕಿಟ್ಗಳನ್ನು ನೀಡುತ್ತಿರುವುದು ಹಾಗೂ ಪ್ರತಿ ಮನೆಯಲ್ಲಿ ಗ್ರಂಥಾಲಯಗಳು ಇರಬೇಕೆಂಬುದು ಈ ಸಂಸ್ಥೆಯ ಆಶಯವಾಗಿದೆ. ಈ ಸಂಸ್ಥೆಯು ಇನ್ನೂ ಹೆಚ್ಚು ಶಿಕ್ಷಣ ಅಭಿವೃದ್ಧಿ ಕಾರ್ಯಗಳನ್ನು ಸಮುದಾಯಗಳಲ್ಲಿ ಹಮ್ಮಿಕೊಳ್ಳಲಿ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಮನೋಜ್, ಭವ್ಯಾ, ಶಬಾನ ಬೇಗಮ್, ಮೋಹನ್, ಚಂದ್ರಕಾಂತ್ ಸೇರಿದಂತೆ ಇನ್ನೂ ಹಲವರು ಗಣ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರೂಪಣೆ ಜಯಶ್ರೀ,
ಸ್ವಾಗತ ಮಹಾದೇವಸ್ವಾಮಿ, ಶ್ವೇತಾ ಪ್ರಾರ್ಥನೆ ಮಾಡಿದರು.




















