ಕೊಪ್ಪಳ/ ಕಾರಟಗಿ: ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ ವೇ.ಮೂರ್ತಿ ಶ್ರೀಶರಣಯ್ಯ ಸ್ವಾಮಿ ಹಿರೇಮಠ ಶ್ರೀ ದುರ್ಗಾದೇವಿಯ ಒಂದು ಸನ್ನಿಧಿಯ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧವನ್ನು ನೀಡಲಾಯಿತು, ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ ದುರ್ಗಾದೇವಿಯ ಕೃಪ ಆಶೀರ್ವಾದದೊಂದಿಗೆ ಶ್ರೀ ವೇದಮೂರ್ತಿ ಶರಣಯ್ಯ ಸ್ವಾಮಿ ಹಿರೇಮಠ ಇವರು ಪ್ರತಿವರ್ಷದಂತೆ ಈ ವರ್ಷವೂ 500ಕ್ಕೂ ಹೆಚ್ಚು ಅಸ್ತಮಾ ರೋಗಿಗಳಿಗೆ ಔಷಧವನ್ನು ವಿತರಿಸಿದರು. ನಂತರದಲ್ಲಿ ಮಾತನಾಡಿದ ಶರಣಯ್ಯ ಸ್ವಾಮಿಗಳು ಪ್ರತಿ ವರ್ಷ ಮೃಗ ಶಿರಯ ಸಂದರ್ಭದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು,ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮೃಗಶ ಮಳೆ! ದುರ್ಗೆ ದೇವತೆ/”ಆದಿ ಪರಶಕ್ತಿ” ಹಿಂದೂ ದೇವಾನು-ದೇವತೆಯರಲ್ಲಿ ಒಬ್ಬರು. ಅವಳು ಯುದ್ಧದ ಅದಿದೇವತೆ, ಪಾರ್ವತಿಯ ಯೋಧ ರೂಪ. ಪುರಾಣದಲ್ಲಿ ದುರ್ಗೆಯನ್ನು ಶಾಂತಿ, ಸಮೃದ್ಧಿ ಮತ್ತು ಧರ್ಮವನ್ನು ಬೆದರಿಸುವ ದುಷ್ಟ ಮತ್ತು ರಾಕ್ಷಸ ಶಕ್ತಿಗಳನ್ನು ಸಂಹರಿಸಲು, ಲೋಕಕಲ್ಯಾಣಕ್ಕಾಗಿ ಅವತಾರವೆತ್ತಳು ಸದಾ ಭಕ್ತರ ಮೇಲೆ ಒಳ್ಳೆ ಬೆಳೆ, ಆರೋಗ್ಯ, ಸಂಪತ್ತು, ಕೊಡಲೆಂದು ಆ ದೇವಿಯನ್ನು ಆರಾಧಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು, ಮಹಿಳೆಯರು, ಜಿಲ್ಲೆ ಹಾಗೂ ತಾಲೂಕು ವಿವಿಧ ಗ್ರಾಮಗಳಿಂದ ಭಕ್ತರ ಆಗಮಿಸಿದ್ದರು.




















