ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಾನ್ಯ ಸಿ. ಎಸ್. ನಾಡಗೌಡರು ( ಅಪ್ಪಾಜಿ ) ತಾಳಿಕೋಟೆಯ ಪ್ರತಿಷ್ಠಿತ ವ್ಯಾಪಾರಿ ಕೇಂದ್ರವಾದ ಕೃಷಿ ಮಾರುಕಟ್ಟೆಯ ಆವರಣದಲ್ಲಿ ಅಂದಾಜು ಮೊತ್ತ ಐದು ಕೋಟಿ ರೂ. ಗಳಲ್ಲಿ ಮಾರುಕಟ್ಟೆ , ಸಿ.ಸಿ ರಸ್ತೆ, ಚರಂಡಿ ಇತ್ಯಾದಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.


ಈ ಪೂಜಾ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆಯ ಅಡತಿ ಅಂಗಡಿ ಮಾಲೀಕರುಗಳಾದ ಶ್ರೀ ಚಿಂತಪ್ಪ ಗೌಡ ಯಾಳಗಿ, ಶ್ರೀ ಅಶೋಕ ಈ. ಜಾಲವಾದಿ, ಶ್ರೀ ಬಸವರಾಜ ಮಾ. ಕುಂಬಾರ ,ಶ್ರೀ ಬಸನಗೌಡ ವಿ. ಪಾಟೀಲ, ಶ್ರೀ ಸಂಗಮೇಶ ಧನ್ನೂರ ಸೇರಿದಂತೆ ಇನ್ನೂ ಹಲವು ಮಾಲಕರು ಭಾಗವಹಿಸಿದ್ದರು. ಇವರುಗಳ ಜೊತೆಗೆ ಶಾಸಕರ ಬೆಂಬಲಿಗರಾದ ಸಿದ್ಧನಗೌಡ ಪಾಟೀಲ (ನಾವದಗಿ ), ಮಾಜಿ ಪುರಸಭೆ ಸದಸ್ಯರಾದ ಪ್ರಭುಗೌಡ ಬ. ಮದರಕಲ, ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಫಯಾಜ್ ಉತ್ನಾಳ, ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಮುರುಗೇಶ ಸರಶೆಟ್ಟಿ, ಎಪಿಎಂಸಿ ಆಡಳಿತ ವರ್ಗದವರು , ಇಂಜಿನಿಯರ್ ಗಳು, ಸೈಯದ್ ಖಾಜಿಯವರು ಭೂಮಿ ಪೂಜೆ ಮಾಡಿದ ನಂತರ ಎಪಿಎಂಸಿ ಭವನದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ ಸಂಗಮೇಶ ಸಿ. ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!