ಅಂಚೆ ಕಾರ್ಡ್ ನಲ್ಲಿ ನಿಮ್ಮಿಷ್ಟದ ಕನ್ನಡ ಕವಿ, ಕನ್ನಡ ಪರ ಹೋರಾಟಗಾರರು, ವಚನಕಾರರು, ದಾಸರು, ತತ್ವಪದಕಾರರು ಒಟ್ಟಾರೆ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರ ಒಂದು ಭಾವಚಿತ್ರವನ್ನು ಬರೆದು ಬಣ್ಣ ತುಂಬಹುದು ಅಥವಾ ಹಾಗೆ ರೇಖಾ ಚಿತ್ರ ಕೂಡ ಇರಬಹುದು.
*18 ವರ್ಷದ ಒಳಗಿನ ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಮುದ್ದಾದ ಚಿತ್ರ ಬರೆದವರಿಗೆ ಇ -ಅಭಿನಂದನಾ ಪತ್ರ ಕೊಡಲಾಗುವುದು.
*ಅಂಚೆ ಕಾರ್ಡ್ ಹಿಂಭಾಗದಲ್ಲಿ ತಪ್ಪದೇ ನಿಮ್ಮ ವಿಳಾಸ ಮತ್ತು ವ್ಯಾಟ್ಸಾಪ್ ಸಂಖ್ಯೆ ಬರೆಯಿರಿ.
*ನಮ್ಮ ಭಾವ ಸುಧೆ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಅಂಚೆ ಕಾರ್ಡ್ ಚಿತ್ರಕಲಾ ಪ್ರದರ್ಶನ ಮಾಡಲಾಗುವುದು.
*ಯಾವುದೇ ಪ್ರವೇಶ ಶುಲ್ಕ ಇಲ್ಲ ಸಂಪೂರ್ಣ ಉಚಿತವಾಗಿದೆ.
*2026ಜೂಲೈ 11ರೊಳಗೆ (ವಿಳಾಸ :ಭವ್ಯ ಸುಧಾಕರ ಜಗಮನೆ, ಮಲ್ಲಿಕಾರ್ಜುನ ನಿಲಯ, ಹಳದಮ್ಮ್ ಶಾಲೆ ಹಿಂಭಾಗ ಹೊನ್ನಾಳಿ 577217,ದಾವಣಗೆರೆ ಜಿಲ್ಲೆ
ಈ ವಿಳಾಸಕ್ಕೆ ಕಳುಹಿಸಿ.
ಕನ್ನಡ ಉಳಿಸಿ ಬೆಳೆಸಲು ಮತ್ತು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಭಾವಸುಧೆ ಸಂಸ್ಥೆ ಮತ್ತು ಅಕ್ಕರೆಯ ಮಕ್ಕಳ ಅಂಗಳದ ಸಂಸ್ಥಾಪಕರಾದ ಭವ್ಯ ಸುಧಾಕರ ಜಗಮನೆ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ



















