ಯುಕೊ ನಿಯೋಗದಿಂದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೊಂದಿಗೆ ಸುಧೀರ್ಘ ಚರ್ಚೆ
ವಿರಾಜಪೇಟೆ : ಪೊನ್ನಣ್ಣ ನಮ್ಮ ಆಸ್ತಿ, ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮನ್ನು ಭೇಟಿ ಮಾಡಿದ ಯುನೈಟೆಡ್ ಕೊಡವ ಆರ್ಗನೈಸೇಷನ್ – (ಯುಕೊ) ನಿಯೋಗದೊಂದಿಗೆ ಮಾತನಾಡುತ್ತಾ ತಮ್ಮ ಮನದಾಳವನ್ನು ಹಂಚಿಕೊಂಡರು.
ಯುನೈಟೆಡ್ ಕೊಡವ ಆರ್ಗನೈಸೇಷನ್- ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಪೊನ್ನಣ್ಣಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಸಲ್ಲಿಸಿ ಸುದೀರ್ಘವಾಗಿ ಚರ್ಚಿಸಿದ ಸಂದರ್ಭದಲ್ಲಿ ಅವರು ಈ ಕುರಿತು ಮಾತನಾಡುತ್ತಾ ಪೊನ್ನಣ್ಣ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಯುವ ಮುಖಂಡರಾಗಿದ್ದಾರೆ, ನಾನು ಅವರ ಮೇಲೆ ಭರವಸೆಯನ್ನಿಟ್ಟು ಟಿಕೆಟ್ ನೀಡಿದ್ದೆ, ಅವರು ಬಂದ ನಂತರ ಕನಿಷ್ಠ ಕೊಡಗಿನಲ್ಲಿ ವಾರಕ್ಕೆ ಎರಡು ದಿನ ಇರಲೇಬೇಕೆಂದಿದ್ದೆ. ಆದರೆ ಅವರು ಗರಿಷ್ಠ ಸಮಯವನ್ನು ಕೊಡಗಿಗೆ ಮೀಸಲಿಡುವುದರ ಮೂಲಕ ನಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಮುಕ್ತವಾಗಿ ನಿಯೋಗದೊಂದಿಗೆ ಮಾತನಾಡಿದರು. ಪೊನ್ನಣ್ಣಗೆ ಮಂತ್ರಿ ಸ್ಥಾನದ ಕುರಿತು ಮಂಜು ಚಿಣ್ಣಪ್ಪ ಒತ್ತಾಯ ಮಾಡಿದಾಗ ನಮಗೂ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಒಲವಿದೆ, ಮುಂದೇನಾಗುತ್ತದೋ ನೋಡುವಾ, ಅವರು ಮಂತ್ರಿಯಾದರೆ ನಿಮ್ಮಷ್ಟೇ ನನಗೂ ಸಂತೋಷವಾಗುತ್ತದೆ ಎಂದು ಡಿ.ಕೆ.ಶಿ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಪೊನ್ನಣ್ಣ ನಮ್ಮ ಆಸ್ತಿ, ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮನ್ನು ಭೇಟಿ ಮಾಡಿದ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ನಿಯೋಗದೊಂದಿಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ನಿಯೋಗದಲ್ಲಿ ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ, ಮಚ್ಚಾಮಾಡ ರಮೇಶ್,
ತೀತಿಮಾಡ ಬೊಸ್ ಅಯ್ಯಪ್ಪ, ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಟ್ಟಂಗಡ ಮೊಣ್ಣಪ್ಪ, ಮಲ್ಲಮಾಡ ದೇವಯ್ಯ, ಅರೆಯಡ ಲೋಕೇಶ್, ಕಳ್ಳಿಚಂಡ ದೀನ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣಪತಿ, ಕಳ್ಳಿಚಂಡ ತನ್ವಿ ಉತ್ತಪ್ಪ, ಬಿದ್ದಂಡ ಜ್ಯೋತಿ ನವೀನ್ ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ ಅಯ್ಯನೆರವಂಡ




















