ಬಸವಕಲ್ಯಾಣ : ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ
ಸಹಭಾಗಿತ್ವದಲ್ಲಿ ನಗರದ ಕಾಳಿಗಲ್ಲಿಯಿಂದ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಹಲವಾರು ವರ್ಷಗಳ ಇತಿಹಾಸವುಳ್ಳ ನಾಗದೇವತೆಯ (ನಾಗಣ್ಣನ ಕಟ್ಟಿ) ದೇವಸ್ಥಾನವಿದ್ದು, ಇಂದು ಕಾಳಿಗಲ್ಲಿಯ ಓಣಿಯ ತಾಯಂದಿರು, ಹಿರಿಯರು, ಯುವಕರ ಬಳಗ ಹಾಗೂ ಸದ್ಭಕರೆಲ್ಲರೂ ಸೇರಿ ನಾಗರ ಪಂಚಮಿ ಹಬ್ಬದ ನಿಮಿತ್ಯ ಗುಡಿಯ ಆವರಣವನ್ನು ಸ್ವಚ್ಛಗೊಳಿಸಿ, ಇಂದು ಬೆಳಿಗ್ಗೆ 09 ಗಂಟೆ ಸುಮಾರಿಗೆ ಮಾತೃಶಕ್ತಿರವರಿಂದ ಪೂಜೆಯನ್ನು ನೆರವೇರಿಸಿದರು.
ಸಾನಿದ್ಯ ವಹಿಸಿದ ಪೂಜ್ಯ ಶ್ರೀ ಡಾ. ಚಂದಪ್ಪ ಎಕಲೂರೆ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾದ ಶ್ರೀಶೈಲ ವಾತಡೆ, ನಗರ ಅಧ್ಯಕ್ಷರಾದ ಪ್ರಕಾಶ ನಿರಾಳೆ, ಬಜರಂಗದಳದ ಜಿಲ್ಲಾ ಸಹ ಸಂಯೋಜಕರಾದ ರವಿ ನಾವದ್ಗೇಕರ, ಶಿವಕುಮಾರ ಖರೂಣೆ, ಗೋರಕ್ಷಾ ಪ್ರಮುಖರಾದ ವಿನೋದ ಬಡಗೇಕರ, ಸಚಿನ ಸೂರ್ಯವಂಶಿ, ಸುನೀಲ ಜಿ. ಮೆಕಾಲೆ, ಸಂಜು ದಳವೆ, ಅಜಯ ಗವಳಿ, ಬಂಟಿ ಜಾಧವ, ಪ್ರಮೋದ ಠಾಕೂರ ಇದ್ದರು.
ಈ ಸಂದರ್ಭದಲ್ಲಿ ನಗರದ ಕಾಳಿಗಲ್ಲಿಯ ಹಾಗೂ ಸುತ್ತಮುತ್ತಲಿನ ಗಲ್ಲಿಯ ಮಾತೆಯರಾದ ಶ್ರೀಮತಿ ಮಲ್ಲಮ್ಮಾ ವಾತಡೆ, ಗಂಗೋತ್ರಿ ವಾತಡೆ, ಬಸಮ್ಮ ಬಪಾರೆ, ಸುರೇಖಾ ಅನವಾಲೆ, ನಿರ್ಮಲಾ ಸ್ವಾಮಿ ಅದರಂತೆ ಓಣಿಯ ಪ್ರಮುಖರಾದ ರವಿಂದ ಬುಕ್ಕಿಗರ, ಸುಭಾಷ ಸಕ್ಕರಬಾವಿ, ಚಂದಕಾಂತ ಬುಡಗೆ, ಕೈಲಾಶ ಭಾಲ್ಕೆ, ಶಿವರಾಜ ಬರದಾಪೂರೆ, ರವಿಂದ್ರಸಿಂಗ್ ಚೌಹಾಣ, ಸುಭಾಷ ಬುಡಗೆ, ಮಧುಕರ ಇಗಾವೆ, ಶಿವಾನಂದ ವಾತಡ, ಆತ್ಮಲಿಂಗ ಸ್ವಾಮಿ, ಮಲ್ಲಯ್ಯ ಶಾನಭೋಗಮರ್, ಸಂಜು ದೇಗಲೂರೆ, ದಿಲೀಪ ಬುಡಗೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ವರದಿ ಶ್ರೀನಿವಾಸ ಬಿರಾದಾರ




















