ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರಿಗೆ ಸಮರ್ಪಕವಾಗಿ 90 ದಿನಗಳ ಕಾಲ ನೀರು ಹರಿಸಿಕೊಂಡಾಗ ಉಪ ಕಾಲುವೆಗಳ ರೈತರಿಗೆ ನೀರಿನ ಅನುಕೂಲ : ಶಾಸಕ ಜೆ.ಎನ್.ಗಣೇಶ

ಬಳ್ಳಾರಿ / ಕಂಪ್ಲಿ : 2026-27ರ ಪ್ರಸಕ್ತ ಜಲವರ್ಷದಲ್ಲಿ ತುಂಗಭದ್ರಾ ಯೋಜನೆಯ ಕೆಳಮಟ್ಟದ ಕಾಲುವೆ (TBP LLC) ಕೋಟಾದಡಿ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಹಾಗೂ ಬರೀ ಹತ್ತು ದಿನ ನೀರೊಯ್ಯುವುದಲ್ಲ 90 ದಿನಗಳ ಕಾಲ ಆಂಧ್ರದವರು ನೀರೊಯ್ಯಬೇಕು. ಅಂದಾಗ ಮಾತ್ರ ಕರ್ನಾಟಕದ ಎಲ್‌ಎಲ್‌ಸಿ ಕಾಲುವೆ ಭಾಗದ ಡಿಸ್ಟ್ರಿಬ್ಯೂಟರ್, ತೂಬುಗಳಿಗೆ ಸಮರ್ಪಕವಾಗಿ ರೈತರಿಗೆ ನೀರೊದಿಗಿಸಲು ಸಾಧ್ಯ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಅವರು ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನ ವಿಧಾನಸಭಾ ಅಧಿವೇಶನದಲ್ಲಿ ತುಂಗಭದ್ರ ಜಲಾಶಯದ ಬಲದಂಡೆಯ ಎಲ್‌ಎಲ್‌ಸಿ ಕಾಲುವೆಗೆ ಆಂಧ್ರ ಮತ್ತು ಕರ್ನಾಟಕ ಕೋಟಾದಡಿ ನೀರು ಹರಿಸಿ, ರೈತರ ಬೆಳೆಗಳಿಗೆ ಅನುವು ಮಾಡಿಕೊಡುವಂತೆ ಧ್ವನಿ ಎತ್ತುವ ಮೂಲಕ ಮನವಿ ಮಾಡಲಾಗಿತ್ತು. ಅದರಂತೆ ಆಂಧ್ರದವರು ಆ. 22ರಿಂದ 31ವರೆಗೆ 10ದಿನ 600 ಕ್ಯೂಸೆಕ್ ನೀರು ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದು ಖುಷಿ ವಿಚಾರವಾದರೂ, 10 ದಿನದ ಬದಲು 90 ದಿನವರೆಗೆ ಆಂಧ್ರದವರು ಎರಡು ಕೋಟಾದಡಿ ನೀರು ಹರಿಸಿಕೊಳ್ಳಬೇಕಾಗಿದೆ. ಇದರಿಂದ ಮಾತ್ರ ನಮ್ಮ ಭಾಗದ ರೈತರಿಗೆ ಸಂಪೂರ್ಣವಾಗಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಸಾಧ್ಯ. ಈಗಾಗಲೇ ಈ ಭಾಗದ ರೈತರು ಬೆಳೆ ಬೆಳೆಯುವುದಕ್ಕೆ ಆಗದೇ, ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಹಾಕಿದಂತಹ ಸಸಿ ಮಡಿಗಳು ಬಹುತೇಕವಾಗಿ ಅವಧಿ ಮುಗಿಸಿ, ಭತ್ತದ ನಾಟಿಗೆ ಬಾರದಂತಾಗಿವೆ. ಜಲಾಶಯದಲ್ಲಿ ನೀರಿದ್ದರೂ, ಆಂಧ್ರದವರು ಈ ಬಾರೀ ತಮ್ಮ ಕೋಟಾದಡಿ ನೀರು ತೆಗೆದುಕೊಳ್ಳದ ಹಿನ್ನಲೆ ಕರ್ನಾಟಕದ ಕೋಟಾದಡಿ ಬಿಟ್ಟಂತಹ ನೀರು, ಕಾಲುವೆ ಮೂಲಕ ಉಪ ಕಾಲುವೆಗಳಿಗೆ ಏರುತ್ತಿಲ್ಲ. ಇದರಿಂದ ರೈತರು ಬೆಳೆ ಇಲ್ಲದೇ ಕಂಗಾಲಾಗಿದ್ದಾರೆ. ಆದ್ದರಿಂದ ಎರಡು ರಾಜ್ಯದ ಕೋಟಾದಡಿ ನೀರು ಹರಿಸಿಕೊಂಡಾಗ ಮಾತ್ರ ಕೆಳ ಮಟ್ಟದ ಉಪ ಕಾಲುವೆಗಳ ರೈತರು ಜಮೀನುಗಳಿಗೆ ನೀರು ಹರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಆಂಧ್ರದವರು ಸತತ 90 ದಿನಗಳ ಕಾಲ ಮಂಡಳಿಯ ಸ್ಲೂಯಿಸ್‌ಗಳಿಗೆ (Sluices) 90 ಕ್ಯೂಸೆಕ್ಸ್ ಹಾಗೂ ಆಂಧ್ರಪ್ರದೇಶ ವ್ಯಾಪ್ತಿಯ ಟಿ.ಬಿ.ಪಿ. ಎಲ್.ಎಲ್.ಸಿ. ಪ್ರದೇಶಕ್ಕೆ 580 ಕ್ಯೂಸೆಕ್ಸ್ ಸೇರಿದಂತೆ ಒಟ್ಟು ನೀರನ್ನು ಹರಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ನೀರೊಯ್ಯುವ ನಿರ್ಧಾರಕ್ಕೆ ಬರಬೇಕು ಎಂದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!