ಕಲಬುರ್ಗಿ ಜಿಲ್ಲೆಯಲ್ಲಿ ಕ್ಲಾಸ್ 1 ಗುತ್ತಿಗೆದಾರರು ನೊಂದಣಿ ಮಾಡಿರುವ ಬಗ್ಗೆ ಸಂಬಂಧಿಸಿದಂತೆ ಕೆಲವು ದಾಖಲಾತಿಗಳನ್ನು ನೀಡಲು ಮಾಹಿತಿಹಕ್ಕು ಅಡಿಯಲ್ಲಿ ಮುಖ್ಯ ಅಭಿಯಂತರರು,ಲೋಕೋಪಯೋಗಿ ಇಲಾಖೆ ಬೆಂಗಳೂರು ಅವರಿಗೆ ಅರ್ಜಿ ಸಲ್ಲಸಿದ್ದು,ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡದೆ ಅರ್ಜಿಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ,ಕಾಮಗಾರಿ ಮಾಡದೆ ಅಕ್ರಮವನ್ನು ಮುಚ್ಚಿ ಹಾಕಲು ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ಸಂಪೂರ್ಣ ಮಾಹಿತಿ ನೀಡಿದ ಕಾರಣ ಇವರ ವಿರುದ್ಧ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು, ಆಯೋಗ ಎರಡು ಬಾರಿ ಅರ್ಜಿ ವಿಚಾರಣೆ ಮಾಡಿದಾಗ ಅರ್ಜಿದಾರರಿಗೆ ಮಾಹಿತಿ ನೀಡಲು ಆದೇಶಿಸಿದರು. ಕೂಡ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ, PWD CE PI ನಿರ್ಲಕ್ಷ್ಯ ಬಗ್ಗೆ ಆಕ್ರೋಶಗೊಂಡ ಆಯುಕ್ತರು ಆರ್ ಪವಿತ್ರ, ಉಪ ಮುಖ್ಯ ಅಭಿಯಂತರರಿಗೆ 25 ಸಾವಿರ ದಂಡ ಹಾಕಿ ಮಾಹಿತಿ ನೀಡಲು ಖಡಕ್ ಆಗಿ ಆದೇಶಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ಶ್ರವಣಕುಮಾರ ಡಿ ನಾಯಕ ಅವರ ತಿಳಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಕಲಬುರ್ಗಿ




















