ರಾಯಚೂರು:ಪ್ರತಿನಿತ್ಯ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ ಲಿಂಗಸೂಗೂರ ತಾಲೂಕಿಗೆ ಹಳ್ಳಿಗಳಿಂದ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಿಂಗಸಗೂರು ತಾಲೂಕಿನ ವಿವಿಧ ಕಾಲೇಜುಗಳಿಗೆ ಬರುತ್ತಿದ್ದು ಇವರಿಗೆ ಬಸ್ಸಿನ ಸೌಲಭ್ಯ ಸರಿಯಾದ ಸಮಯಕ್ಕೆ ಇಲ್ಲದಂತಾಗಿದೆ.ಕವಿತಾಳ,ವಟಗಲ್, ಅಮೀನಗಡ,ಪಾಮನಕೇಲ್ಲೂರು,ಚಿಕ್ಕಹೇಸರೂರು, ಸರ್ಜಾಪುರ,ಕುಪ್ಪಿಗುಡ್ಡ ಮಾರ್ಗದಿಂದ ಸಾವಿರಾರು ವಿದ್ಯಾರ್ಥಿಗಳು ಲಿಂಗಸೂಗೂರಿಗೆ ವಿದ್ಯಾಭ್ಯಾಸಕ್ಕೆ ಬರುತಿದ್ದು ಮಾರ್ಗ ಮಧ್ಯದಲ್ಲಿ ಪಾಮನಕೇಲ್ಲೂರಲ್ಲಿ ಬಸ್ ತುಂಬಿಕೊಂಡು ಬರುತಿದ್ದು,ಉಳಿದ ಮೂರು ಹಳ್ಳಿ ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು ಸ್ಥಳ ಇಲ್ಲದಂತಾಗುತ್ತಿದೆ ಮತ್ತು ಹೆಣ್ಣುಮಕ್ಕಳು ಇದರಿಂದ ಬಹಳ ಸಮಸ್ಯೆ ಎದರಿಸುತ್ತಿದ್ದು ಬಸ್ಸನ್ನು ಹತ್ತಲು ಹರ ಸಾಹಸ ಪಡುತ್ತಿರುವ ಘಟನೆ ಇವತ್ತು ಕುಪ್ಪಿಗುಡ್ಡದಲ್ಲಿ ನಡೆದಿರುವ ಈ ಚಿತ್ರವೇ ಎಲ್ಲದಕ್ಕೂ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ತೊಂದರೆ ಆಗುತ್ತದೆ ಎಂದು ಅರಿತು ಡ್ರೈವರ್ ತಮ್ಮ ಬಾಗಿಲಿನಲ್ಲಿ ಹತ್ತಿಸಿ ಕರೆದುಕೊಂಡು ಹೋಗುತ್ತಿರುವ ಘಟನೆ ನಡೆದಿದೆ.
ಇದು ಒಂದು ದಿನದ ಘಟನೆ ಅಲ್ಲ ದಿನಾಲೂ ಇದೆ ಗೋಳು ಮತ್ತು ಬಹಳ ದೂರದ ಊರಿನಿಂದ ಬರುವ ಪ್ರಯಾಣಿಕರಿಗೂ ಕೂಡಾ ತೊಂದರೆ ಆಗುತ್ತಿದೆ ಇದಕ್ಕೆ ದಯವಿಟ್ಟು ಪರಿಹಾರ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಕರುನಾಡ ಕಂದ ಪತ್ರಿಕೆ ಯೊಂದಿಗೆ ಮಾತನಾಡಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದಾರೆ.
ವರದಿ-ಪುನೀತ ಕುಮಾರ್




















