̊ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ 41ನೇ ವರ್ಷದ ದಸರಾ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸೇಡಂ ನಗರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭರತನಾಟ್ಯ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು ವಾಸವದತ್ತ ವಿದ್ಯಾ ವಿಹಾರದ ವಿದ್ಯಾರ್ಥಿನಿಯರಾದ ಶ್ರಾವಣಿ ಭರತನಾಟ್ಯ ತಂಡದ ಮುಖ್ಯಸ್ಥರು ಶೃತಿ ಹಾಗೂ ರೂಪ ಗುಂಡಪ್ಪ ಅಲ್ಲುರ್ ಹಾಗೂ ಮಹಿಪಾಲ ರೆಡ್ಡಿ ಮುನ್ನುರ್ ಶೋಭಾ ರಾಣಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸೇಡಂ ನಗರದ ಖ್ಯಾತ ಕರಾಟೆ ಶಿಕ್ಷಕ ಸಾಬಣ್ಣ ಸಿ ಅಳೋಳ್ಳಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




















