ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಳಗಿ ತಾಲೂಕಿನಾದ್ಯಂತ ಶಶಿಲ ನಮೋಶಿ ಮಿಂಚಿನ ಸಂಚಾರ

ಕಲಬುರಗಿ/ ಕಾಳಗಿ:ತಾಲೂಕಿನಾದ್ಯಂತ ಗುರುವಾರ ಮಿಂಚಿನ ಸಂಚಾರ ಕೈಗೊಂಡ ವಿಧಾನ ಪರಿಷತ್ ಸದಸ್ಯ ಶಶಿಲ ನಮೋಶಿ ಅವರು, ಸರಕಾರಿ, ಅರೆಸರಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರ ಕುಂದು-ಕೊರತೆಗಳನ್ನಾಲಿಸಿದರು.
ಹಳೆ ಪಿಂಚಣಿ, ಮುಂಬಡ್ತಿ, ವರ್ಗಾವಣೆ, ಅತಿಥಿ ಶಿಕ್ಷಕರ ಸಂಬಳ, ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ಶಿಕ್ಷಕರು ತಮ್ಮ ಅಳಲುಗಳನ್ನು ಮುಂದಿಟ್ಟರು.
ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿ ತೋರಿಸಿ, ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕಷ್ಟ-ಸುಖಗಳಲ್ಲಿ ಸದಾಕಾಲ ಭಾಗಿಯಾಗಿ, ಸತತವಾಗಿ ಸಂಪರ್ಕದಲ್ಲಿರುವ ಏಕೈಕ ನಾಯಕರು ತಾವುಗಳು ಎಂದು ಪರಿಷತ್ತಿನ ಸದಸ್ಯ ಬಗ್ಗೆ ಶಿಕ್ಷಕ ಸಮೂಹ ಪ್ರಶಂಸೆ ವ್ಯಕ್ತಪಡಿಸಿದರು.
ಸರಕಾರಿ ಪ್ರೌಢ ಶಾಲೆ, ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಮಾಡಬೂಳ, ಕೋರವಾರ, ಗೋಟೂರ, ಸುಗೂರ(ಕೆ), ಕೋಡ್ಲಿ ಶಾಲೆಗಳನ್ನೊಳಗೊಂಡು ಸಂಜೆಯ ಹೊತ್ತನ ವರೆಗೂ ತಾಲೂಕಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾಳಗಿ ತಾಲೂಕು ಅಧ್ಯಕ್ಷ ಅನೀಲ ಗುತ್ತೇದಾರ, ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ವಿರೇಶ ಮಾಲೀಪಾಟಿಲ ಕಾಳಗಿ, ರಮೇಶ ರಾಠೋಡ, ಸಿದ್ದರೆಡ್ಡಿ ಸಂಗೋಳಗಿ, ವಿರೂಪಾಕ್ಷಯ್ಯ ಹಿರೇಮಠ, ಭಾಷಾಅಲಿ ಕೋಡ್ಲಿ, ಸಂಗಪ್ಪ ಅರಣಕಲ, ಅಂದಾಸ ಮದಾನೆ, ಮಹಾಂತೇಶ, ಶ್ರೀಶೈಲ ಹಿರೇಮಠ ಸೇರಿದಂತೆ ಅನೇಕರು ಜೊತೆಗಿದ್ದರು.

ವರದಿ : ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!