
ದಿವ್ಯಾಂಗರ ಏಳ್ಗೆಗೆ ಶ್ರಮಿಸಲು ಶತಸಿದ್ಧ – ಶರಣಪ್ಪ ಮಡಿವಾಳ ಭರವಸೆ.
ಯಾದಗಿರಿ/ಗುರುಮಠಕಲ್: ಡಿ.12 ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆ ಗುರುಮಠಕಲ್ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಆಯ್ದೆಯಾದ 7 ಜನ ವಿಕಲಚೇತನರಿಗೆ ಸೀಡ್ ಫಂಡ್ ಯೋಜನೆಯಡಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಶ್ರೀ ಶರಣಪ್ಪ ಮಡಿವಾಳ ಪುರಸಭೆಯ ಮುಖ್ಯಧಿಕಾರಿಗಳು ಗುರುಮಠಕಲ್ ರವರು ನಗರದಲ್ಲಿರುವ ವಿಕಲಚೇತನರ ಸರ್ವಾಂಗಣ ಪ್ರಗತಿಗೆ ವಿವಿಧ ಇಲಾಖೆಗಳ ಸಹಕಾರರೊಂದಿಗೆ ಪುರಸಭೆ ವತಿಯಿಂದ ಶ್ರಮಿಸಲು ಶತಸಿದ್ಧ ಎಂಬದಾಗಿ ಭರವಸೆ ನೀಡಿದರು.
ನೂತನವಾಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿರುವ ಶರಣಪ್ಪ ಮಡಿವಾಳ ಅವರಿಗೆ ಎಪಿಡಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಪುರಸಭೆಯ ಕಾರ್ಯಾಲಯದ ವತಿಯಿಂದ ವಿಕಲಚೇತನರಿಗೆ ಇರುವ 5% ಅನುದಾನದ ಸಮರ್ಪಕ ಸದ್ಬಳಕೆ, ಹಾಗೂ ಬಹುದಿನಗಳಿಂದ ಖಾಲಿ ಇರುವ ನಗರ ಪುರ್ನವಸತಿ ಕಾರ್ಯಕರ್ತರ ನೇಮಕಾತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಡಿಸೆಂಬರ್ 3 ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಣೆ ಮಾಡುವಂತೆ ಒತ್ತಾಯಿಸಿ ತಾಲೂಕ ಆರ್.ಪಿ.ಡಿ ಟಾಸ್ಕ್ ಪೊರ್ಸ್ ಆಧ್ಯಕ್ಷರಾದ ಸಿದ್ದನಗೌಡ ನಜರಪೂರ ಸಮ್ಮಖದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿಗಾಳದ ಶ್ರೀ ಡಾ. ಮಹೇಶ ಕುಮಾರ್ ಸಜ್ಜನ, ಹಾಗೂ ಎಪಿಡಿ ಸಂಸ್ಥೆಯ ಹುಲಿಯಪ್ಪ, ಶಿವಯೋಗಪ್ಪ, ವಿರುಪಾಕ್ಷಪ್ಪ ಮಾ.ಪಾ. ಶಿಲ್ಪಾ ಎಸ್.ಶಿಲ್ಪಾ ಎಂ, ಅಂಬಿಕಾ, ರೇಷ್ಮಾ,ನಾಗಮಣಿ, ನಾಗರಾಜ,ಆರ್.ಪಿ.ಡಿ ಟಾಸ್ಕ ಪೊರ್ಸ ಪದಾಧಿಕಾರಿಗಳು, ಹಾಗೂ ವಿವಿಧ ಗ್ರಾಮಗಳಿಂದ ಬಂದಂತಹ ವಿಕಲಚೇತನರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















