
ಕೊಪ್ಪಳ : ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಕೊಪ್ಪಳ ಹಾಗೂ ಸಮನ್ವಯ ಶಿಕ್ಷಣ ವಿಭಾಗದಿಂದ ಕೊಪ್ಪಳ ತಾಲೂಕಿನ ವಿಶೇಷ ಚೇತನ ಮಕ್ಕಳ 2025-26 ನೇ ಸಾಲಿನ ಕ್ರೀಡೆ ಅರಿವು, ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ದಿನಾಂಕ 4.2.2026 ರಂದು ಆಯೋಜನೆ ಮಾಡಲಾಗಿತ್ತು.
ಇದರಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ವಿವಿಧ ವಿಕಲತೆ ಒಳಗೊಂಡಂತೆ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹನುಮಂತಪ್ಪ ಇವರು ಚಾಲನೆ ನೀಡಿದರು.
ಮಕ್ಕಳನ್ನು ಮುದ್ಲಾಪುರದ ಹಿರೇಹಳ್ಳ ಡ್ಯಾಮ್ ಭೇಟಿ ನೀಡಿ ಅಲ್ಲಿಂದ ಶಾಲೆ ಆವರಣದಲ್ಲಿ ಓಟದ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದರಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಮಕ್ಕಳಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಇದರಲ್ಲಿ ಬಿಐಇಆರ್ಟಿ ಬಲರಾಮ್ ಪೂಜಾರ, ಲಕ್ಷ್ಮಣ ಪಲ್ಲೆದ, ಹಾಗೂ ಪಾಲಕರು ಪೋಷಕರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ.




















