ಯಲಬುರ್ಗಾ : ತಾಲೂಕಿನ ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಯಶವಂತ ಶರಣರ ಸಾನಿಧ್ಯದಲ್ಲಿ ೫ ನೇಯ ವಚನ ದರ್ಶನ ಚಿಂತನಗೋಷ್ಠಿ ಕಾರ್ಯಕ್ರಮ ಜರುಗಿತು.
ದೇಶ ಗುರಿಯಾಗಿ ಹೋದವರ ಕಂಡೆ , ತಮಂದ ಗುರಿಯಾಗಿ ಲಯವಾಗಿ ಹೊದವರ ಕಂಡೆ, ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ, ನೀ ಗುರಿಯಾಗಿ ಹೋದವರನಾರನು ಕಾಣೆ ಗುಹೇಶ್ವರ ವಿಷಯ ಕುರಿತು ಶರಣರು ಮಾತನಾಡಿದರು.
ಈ ನಾಡಿನಲ್ಲಿ ತತ್ವಗಳಿಗೆ ಬರವಿಲ್ಲ ತತ್ವಗಳಿಗೆ ಸೋತ್ತಾಗುವ ಬರವಿದೆ ಶರಣರು ಧರ್ಮವನ್ನು ಪಾಲಿಸಬೇಕು ಎಂದು ಗುಡಿಹಳ್ಳಿಯ ಅಮರೇಶ ಶರಣರು ಮಾತನಾಡಿದರು.
ಶರಣರಾದ ,ಬಸನಗೌಡ ಪಾಟೀಲ್ ಹಾಲಕೇರಿ, ಸಂಗಣ್ಣ ಟೆಂಗಿನಕಾಯಿ, ಶರಣಬಸಪ್ಪ ದಾನಕೈ, ಅಮರೇಗೌಡ ಪಾಟೀಲ್ ಮಾತನಾಡಿದರು. ಎಮ್.ಎಸ್.ನೀಲಕಂಠಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಸಿದ್ದು ಕಿನ್ನಾಳ, ಡಾ.ಸುನೀಲಕುಮಾರ ಹನುಮಣ್ಣನವರ ,ಸೋಮಶೇಖರ ಕೊಳಜಿ, ಸುರೇಶ ಅವಾರಿ, ಯಲ್ಲಪ್ಪ ಬೇವೂರ, ವಿರುಪಾಕ್ಷಯ್ಯ ಪರಯ್ಯನಮಠ ಹಾಗೂ ಭೈರನಾಯಕನಳ್ಳಿಯ ಗ್ರಾಮದ ಶರಣರು ಭಾಗವಹಿಸಿದ್ದರು.
ತ್ರಿಲಿಂಗಯ್ಯ ಬೀಳಗಿಮಠ, ಕುಬೇರಪ್ಪ ತೋಪಲಕಟ್ಟಿ ಸಂಗೀತ ಸೇವೆ ನೀಡಿದರು. ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ ವಂದಿಸಿದರು. ನಂತರ ಪ್ರಸಾದ ಸೇವೆ ಜರುಗಿತು.
- ಕರುನಾಡ ಕಂದ ಪತ್ರಿಕೆ




















