ಸಿರುಗುಪ್ಪ – ದೇಶನೂರಿನ ವಿನಾಯಕ ನಗರ ಕ್ಯಾಂಪ್ ನಲ್ಲಿ ಸುತ್ತ ಮುತ್ತ ಆಲಿಕಲ್ಲು ಮಳೆ ಅಬ್ಬರಕ್ಕೆ ಸುಮಾರು 200 ಎಕರೆ ಭತ್ತದ ಬೆಳೆ ಕಬ್ಬು ಬಾಳೆ ತೆಂಗು ಮುಖ್ಯವಾಗಿ ಭತ್ತದ ಬೆಳೆ ನಾಶವಾಗಿದೆ ಗುಡಿಸಲು ತಗಡಿನ ಛಾವಣಿಗಳು ಗಾಳಿಗೆ ಹಾರಿ ಹೋಗಿವೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತ ದೇಶನೂರು ಗ್ರಾಮ ಪಂಚಾಯತ್ ನ ವಿನಾಯಕ ನಗರ ಕ್ಯಾಂಪ್ ನಲ್ಲಿ ಕಂಡ ಸೋಮವಾರ ,ಮಂಗಳವಾರ ಸುರಿದ ಧಾರಕಾರ ಮಳೆ ಬಿರುಗಾಳಿ ಗುಡುಗು ಸಿಡಿಲು ಮಿಂಚು ಆಲಿಕಲ್ಲು ಮಳೆಗೆ ಮಳೆಯ ಅಬ್ಬರಕ್ಕೆ ಬೆಳೆ ಹಾನಿಯಾಗಿದೆ. ಗ್ರಾಮ ಆಡಳಿತ ಅಧಿಕಾರಿ ಎಂ.ರಾಮಪ್ಪ ಕೃಷಿ ಅಧಿಕಾರಿ ಎ ಓ ಪುರುಷೋತ್ತಮ ಅವರು ಸರ್ವೆ ನಂಬರ್ 416 / ಎ12, 416 /1 ಬಿ1, 416 /1, 417/ಡಿ, 377/ಸಿ, 377/ಬಿ, 370 ಸಾಮಾಜಿಕ ಕಾರ್ಯಕರ್ತರು ಜನಾಭಿಪ್ರಾಯ ಮುಖಂಡರಾದ ಅಬ್ದುಲ್ ನಬಿ ರೈತರಾದ ದೇಶನೂರು ಯಂಕಣ್ಣ, ಹಚ್ಚೋಳಿ ಮಂಜುನಾಥ,ಹಚ್ಚೋಳ್ಳಿ ಯೋಗೇಶ, ಹಚ್ಚೋಳ್ಳಿ ಚಂದ್ರಪ್ಪ, ದೇವೇಂದ್ರ, ವೆಂಕಟರಮಣ, ವೀರೇಶ, ಸಿ ಹೆಚ್ ಗೋಪಾಲಕೃಷ್ಣ, ಬಾಬಯ್ಯ, ವೇಣುಗೋಪಾಲ, ಪಾಂಡುರಂಗ ಮತ್ತಿತರ ರೈತರು ಇದ್ದರು ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು. ಗ್ರಾಮ ಆಡಳಿತ ಅಧಿಕಾರಿ ಎಂ.ರಾಮಪ್ಪ, ಕೃಷಿ ಅಧಿಕಾರಿ ಎ ಓ ಪುರುಷೋತ್ತಮ ಅವರು ರೈತರ ಮನವಿ ಸ್ವೀಕರಿಸಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಭರವಸೆ ನೀಡಿದರು.
ವರದಿ : ಮಸೀದಿ. ಅಬ್ದುಲ್ ಗೌಸ್




















