ಕಲಬುರಗಿ/ ಕಾಳಗಿ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ರಟಕಲ್ ವಿರಕ್ತ ಮಠದ ಪರಮಪೂಜ್ಯರಾದ ಶ್ರೀ ನೀಲಕಂಠ ದೇವರು ಹಾಗೂ ರೇವಣಸಿದ್ದೇಶ್ವರ ಶ್ರೀಮಠದ ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಹಾಗೂ ಗೌರಿ ಗಣೇಶ ಗುಡ್ಡದ ಪೂಜ್ಯರಾದ ರೇವಣಸಿದ್ದ ಶರಣರು ಇಂದು ಹೇರೂರು ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರರಾದ ಇಂತಿಯಾಜ್ ಅಲ್ಲಿ ಅವರ ಮನೆಗೆ ಭೇಟಿಯಾಗಿ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಾಮ್ ಶೆಟ್ಟಿ, ವೀರಣ್ಣ ಗಂಗಾಣಿ, ಚಂದ್ರಕಾಂತ್ ಭೀಮಳ್ಳಿ, ಮಾನ್ ಶೆಟ್ಟಿ ಸಿಗಿ, ಆಕಾಶ್ ಸಾಲಿಮಠ ಅವರು ಬರುವ 27ರಂದು ನಡೆಯಲಿರುವ ಪಟ್ಟಾಧಿಕಾರ ಮಹೋತ್ಸವದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















