ಬಳ್ಳಾರಿ / ಕಂಪ್ಲಿ : ಕೆಲ ದಿನಗಳ ಹಿಂದೆ ಆರಂಭವಾಗಿ ಕಂಪ್ಲಿ ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿ ಕಾಮಗಾರಿ ಇದೀಗ ಮುಕ್ತಾಯಗೊಂಡಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ರಸ್ತೆ ಡಾಂಬರೀಕರಣವಾಗದೇ ಈ ರಸ್ತೆಯಲ್ಲಿ ಧೂಳು ಮುಚ್ಚಿ ಹೋಗಿದ್ದು, ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಮಾಡುವುದು ಅತ್ಯಂತ ದುಸ್ತರವಾಗಿತ್ತು ಹಾಗೂ ಈ ರಸ್ತೆ ಬಹುತೇಕ ಜನವಸತಿ ಪ್ರದೇಶವಾಗಿದ್ದರಿಂದ ನಿವಾಸಿಗಳು ಪ್ರತಿದಿನ ಜೀವನ ನಡೆಸುವುದು ತೊಂದರೆಯಾಗಿತ್ತು. ಧೂಳಿನಿಂದ ಅನೇಕ ರೋಗರುಜಿನಗಳ ಆತಂಕ ಮನೆ ಮಾಡಿತ್ತು. ಅಂತು ಇಂತೂ ರಸ್ತೆ ಡಾಂಬರೀಕಣವಾಗಿದೆ, ಆದರೆ, ರಸ್ತೆಯ ಎರಡು ಬದಿಗೆ ಇನ್ನು ಫೇವರ್ಸ್ಗಳನ್ನು ಜೋಡಿಸಿಲ್ಲದಿರುವುದರಿಂದ ರಸ್ತೆ ಬದಿಯಲ್ಲಿ ದ್ವಿಚಕ್ರ ಸೇರಿದಂತೆ ಇತರೆ ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಆದಷ್ಟು ಬೇಗ ರಸ್ತೆಯಲ್ಲಿ ಫೇವರ್ಸ್ಗಳನ್ನು ಜೋಡಿವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















