
ತುಮಕೂರು: ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜೀ ರವರು, ರಾಜ್ಯಪಾಲರು ಸನ್ಮಾನ್ಯ ಶ್ರೀ ಥ್ಯಾವರ್ ಚಂದ್ ಗೆಲ್ಲೋಟ್ ರವರು ಹಾಗೂ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ , ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವರು ಡಾ. ಜಿ ಪರಮೇಶ್ವರ್ ಹಾಗೂ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ವಿ. ಸೋಮಣ್ಣನವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಸುರೇಶ್ ಗೌಡರು, ತುಮಕೂರು ನಗರ ಶಾಸಕರು ಜಿ ಬಿ ಜ್ಯೋತಿ ಗಣೇಶ್ ಹಾಗೂ ಇನ್ನೂ ಮುಂತಾದ ಗಣ್ಯಾತಿ ಗಣ್ಯರು ಆಗಮಿಸಿದ್ದರು. ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ಶ್ರೀ ದ್ರೌಪದಿ ಮುರ್ಮಾರವರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಗದ್ದುಗೆ ಮತ್ತು ಪ್ರಾರ್ಥನಾ ಮಂದಿರ ಎಲ್ಲಾ ವೀಕ್ಷಣೆ ಮಾಡುತ್ತಾ ವೇದಿಕೆಗೆ ಆಗಮಿಸಿದ ವೇಳೆ ಎಲ್ಲರೂ ಎದ್ದು ನಿಂತು ಗೌರವ ನೀಡುತ್ತಾ ವಂದೇ ಮಾತರಂ , ರಾಷ್ಟ್ರಗೀತೆ ಮೂಲಕ ಸ್ವಾಗತಿಸಿದರು ತದ ನಂತರ ಅವರು ಶ್ರೀಗಳನ್ನು ನೆನೆಯುತ್ತಾ ಓಂ ನಮಃ ಶಿವಾಯ ಎಂದು ಮೂರು ಬಾರಿ ಹೇಳುತ್ತಾ ” ಸಹೋದರ ಸಹೋದರಿಯರೇ ಎಂದು ತಮ್ಮ ಮಾತನ್ನು ಪ್ರಾರಂಭಿಸಿ ಸ್ವಾಮೀಜಿಯವರನ್ನು ಉದ್ದೇಶಿಸಿ ಅವರು ಮಾಡಿರುವ ದಾಸೋಹ ಮತ್ತು ಒಳ್ಳೆ ಕಾರ್ಯಗಳನ್ನು ಕುರಿತು ಮಾತನಾಡಿ ಕೊನೆಗೆ ಜೈ ಹಿಂದ್ ಎಂದು ಹೇಳಿ ಭಾಷಣ ಮುಗಿಸಿದರು.
ಮುರ್ಮು ಅವರು ಸಾಧಾರಣ ಬಡ ಕುಟುಂಬದಲ್ಲಿ ಜನಿಸಿ ಈಗ ಭಾರತದ ರಾಷ್ಟ್ರಪತಿಯಾಗಿದ್ದರೂ ಸರಳ ಜೀವನ, ಸರಳ ನಡತೆ ಹೊಂದಿದ್ದಾರೆ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಬಂದಿರುವಂತಹ ರಾಜ್ಯಪಾಲರು ಥ್ಯಾವರ ಚಂದ್ ಗೆಹ್ಲೋಟ್ ರವರು ಸ್ವಾಮೀಜಿಯವರನ್ನು ಉದ್ದೇಶಿಸಿ ಮಾತನಾಡಿದರು. ಹೀಗೆ ಒಬ್ಬೊಬ್ಬರಾಗಿ ಮಾತನಾಡುತ್ತಾ ಕಾರ್ಯಕ್ರಮ ಕೊನೆ ಕ್ಷಣದವರೆಗೂ ತಲುಪಿತು. ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸಿದ್ದಗಂಗಾ ಮಠಕ್ಕೆ ಆಗಮಿಸಿದ ಸಾವಿರಾರು ಮಂದಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಭಕ್ತರಿಗೆ ಭರ್ಜರಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ವರದಿ ಲಕ್ಷ್ಮಿ ತುಮಕೂರು.




















