ಬಳ್ಳಾರಿ / ಕಂಪ್ಲಿ: ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಂಪ್ಲಿಯ ದೇವಲಾಪುರ ರಾಘವೆಂದ್ರ ಇವರ ಸುಪುತ್ರಿ ದೇವಲಾಪುರ ವೈಷ್ಣವಿ ರಾಘವೇಂದ್ರ ಇವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ಶೇ. 99.67.% ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ಕಂಪ್ಲಿ ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.
ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದ ದೇವಲಾಪುರ ವೈಷ್ಣವಿ ರಾಘವೇಂದ್ರ ಇವರನ್ನು ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸುಜ್ಞಾನ ಮೂರ್ತಿ ಹಾಗೂ ಪದಾಧಿಕಾರಿಗಳು ಕಂಪ್ಲಿ ಪಟ್ಟಣದ ದೇವಲಾಪುರ ರಾಘವೇಂದ್ರ ಅವರ ನಿವಾಸಕ್ಕೆ ಆಗಮಿಸಿ ದೇವಲಾಪುರ ವೈಷ್ಣವಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಡಿ.ವೀರಪ್ಪ ಆಚಾರಿ, ಕಾಳಾಚಾರಿ, ನಾರಾಯಣಾಚಾರಿ, ಚಂದ್ರಶೇಖರ ಆಚಾರಿ, ಡಿ.ಭರತ್ ರಾಘವೇಂದ್ರ ಆಚಾರ್ ಮತ್ತು ಕುಟುಂಬದವರು, ಸಿಂಧನೂರು, ಕಂಪ್ಲಿಯ ವಿಶ್ವಕರ್ಮ ಸಮುದಾಯದವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















