ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಗವಂತನ ಸ್ಮರಣೆ ಮಾಡಬೇಕು : ಶ್ರೀ ಗಳು

ಕೊಪ್ಪಳ/ ಯಲಬುರ್ಗಾ: ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ನು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಅಗಿ ಹುಣ್ಣಿಮೆಯ ದಿನದ 81ನೇ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಇನ್ನೊಬ್ಬರಿಗೆ ಕೆಡಕನ್ನು ಬಯಸದೆ ,ಅವರ ಮನಸ್ಸಿಗೆ ನೋವುಂಟು ಮಾಡಲಾರದೆ ಒಳಿತು ಮಾಡುವ ಕಾರ್ಯ ಮಾಡುವಲ್ಲಿ ಮುಂದಾಗಬೇಕು ಎಂದರು. ದಮ್ಮೂರಿನ ಶ್ರೀ ಭೀಮಾಂಬಿಕಾದೇವಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಸಾನಿದ್ಯ ವಹಿಸಿದ್ದರು. ಭಕ್ತನಾದೋಡೆ ಬಾಳೆಹಣ್ಣಿನಂತೆ ಇರಬೇಕು ಎಂಬ ವಚನದ ಸಾರಾಂಶದ ಬಗ್ಗೆ ಹಿರೇವಂಕಲಕುಂಟಾದ ಯೋಗ ಗುರು ಹರ್ಷಾನಂದ ಅವರು ಮಾತನಾಡಿ ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು ಶಿಕ್ಷಣ ಕಲಿತ ಮಕ್ಕಳು ಹಾಳಾಗಬಹುದು, ಸಂಸ್ಕಾರ ಕಲಿತ ಮಕ್ಕಳು ಎಂದೂ ಹಾಳಾಗುವುದಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸಿಮಿತವಾಗಬಾರದು ,ಗುರು ಹಿರಿಯಲ್ಲಿ ವಿನಯದಿಂದ ಬಾಗಿದಾಗ ಉನ್ನತ ಮಟ್ಟದಲ್ಲಿ ಬೆಳೆಯಲು ಸಾದ್ಯ ಎಂದು ದಮ್ಮೂರ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಈ ವೇಳೆ ಶರಣರಾದ ಶಂಕರಗೌಡ ಮಾಲಿಪಾಟೀಲ್, ನೀಲನಗೌಡ ಹೊಸಮನಿ, ನಿಂಗಪ್ಪ ಹಳ್ಳಿಕೇರಿ, ದುರಗಪ್ಪ ಮಕ್ಕಳ್ಳಿ, ಮಳಿಯಪ್ಪಯ್ಯ, ಅಲಿಸಾಬ ನದಾಫ್, ಹುಸೇನಸಾಬ ಹಿರೇಕೊಪ್ಪ, ಚಂದ್ರಶೇಖರ ಕೋಗಿಲೆ, ಶರಣಯ್ಯ ಬಳಗಾನೂರ, ದೇವಪ್ಪ ಹಡಪದ, ಪಾಲಾಕ್ಷಪ್ಪ ಪತ್ತಾರ , ನಾಗನಗೌಡ ಮಾಲಿಪಾಟೀಲ್, ಸಂಗಪ್ಪ ಹುಣಸಿಹಾಳ, ಫಕೀರಗೌಡ ಮಾ.ಪಾಟೀಲ, ಮರೆಗೌಡ ಸಂಗನಾಳ, ಬಾಳಪ್ಪ ಜರಕುಂಟಿ, ಹನುಮಪ್ಪ ರಾವಣಕಿ, ಯಮನಗೌಡ್ರ ಮಾಲಿ ಪಾಟೀಲ ,ಕಾವೇರಿ ನಾವಡೆ, ಅಂಬಿಕಾ ಎನ್,ಶರಣಪ್ಪ ಭೂತಲ್, ಕಾಳೇಶ ಕಮ್ಮಾರ, ಶ್ರೀಕಾಂತಗೌಡ ಮಾಲಿಪಾಟೀಲ್, ಷಣ್ಮುಖಪ್ಪ ಕೋವಿ, ಗುನ್ನೆಪ್ಪ ಚೆನ್ನದಾಸರ ಸೇರಿದಂತೆ ಇತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!